ಸುದ್ದಿ ಕಣಜ.ಕಾಂ
ಭದ್ರಾವತಿ: ಮೂರು ಜನ ಅಡಕೆ ಚೋರರನ್ನು ಹೊಳೆಹೊನ್ನೂರು ಪೊಲೀಸರು ಶುಕ್ರವಾರ ಬಂಧಿಸಿ, ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ.
ಇದನ್ನೂ ಓದಿ । ಚರ್ಚ್ ಎದುರು 3 ದಿನಗಳ ಧರಣಿ, ಕಾರಣವೇನು ಗೊತ್ತಾ?
ಚನ್ನಗಿರಿಯ ರೇವಣ್ಣಸಿದ್ದಪ್ಪ (27), ಭದ್ರಾವತಿಯ ರಾಜೇಶ್ (24), ಪ್ರತಾಪ್ (21) ಬಂಧಿತರು. ಆರೋಪಿಗಳ ವಿರುದ್ಧ 2020ರಲ್ಲಿ ಹೊಳೆಹೊನ್ನೂರು ಪೊಲೀಸ್ ಠಾಣೆಯಲ್ಲಿ ಎರಡು ಹಾಗೂ 2021ರಲ್ಲಿ ಒಂದು ಸೇರಿ ಒಟ್ಟು ಮೂರು ಪ್ರಕರಣ ದಾಖಲಾಗಿದ್ದವು.
ಕಾರ್ಯಾಚರಣೆ ಮಾಡಿದ ತಂಡ | ಭದ್ರಾವತಿ ಡಿವೈಎಸ್.ಪಿ ಕೃಷ್ಣಮೂರ್ತಿ ಮಾರ್ಗದರ್ಶನದಲ್ಲಿ ಭದ್ರಾವತಿ ಗ್ರಾಮಾಂತರ ವೃತ್ತದ ಸಿಪಿಐ ಇ.ಒ.ಮಂಜುನಾಥ್ ನೇತೃತ್ವದಲ್ಲಿ ಹೊಳೆಹೊನ್ನೂರು ಠಾಣೆ ಪಿಎಸ್.ಐ ಯೋಗೇಶ್ ಸಿಬ್ಬಂದಿ ಆನಂದ್, ಕೃಷ್ಣಮೂರ್ತಿ, ಅಣ್ಣಪ್ಪ, ಪ್ರಸನ್ನ, ದೊಡ್ಡೇಶ್ ಅವರನ್ನು ಒಳಗೊಂಡ ತಂಡ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ವಶಕ್ಕೆ ಪಡೆದಿದೆ.
ಏನೇನು ವಶಕ್ಕೆ | ಬಂಧಿತರದಿಂದ 8.80 ಲಕ್ಷ ರೂಪಾಯಿ ಮೌಲ್ಯದ ಒಟ್ಟು 22 ಕ್ವಿಂಟಾಲ್ ಅಡಕೆ, ಅಂದಾಜು 1.25 ಲಕ್ಷ ರೂಪಾಯಿ ಮೌಲ್ಯದ ಕೃತ್ಯಕ್ಕೆ ಬಳಸಿದ 3 ದ್ವಿ ಚಕ್ರ ವಾಹನಗಳು ವಶಕ್ಕೆ ಪಡೆಯಲಾಗಿದೆ.