ಸುದ್ದಿ ಕಣಜ.ಕಾಂ
ಬೆಂಗಳೂರು: ನಾನೇನು ರಾಸಲೀಲೆ ಮಾಡಿಲ್ಲ. ನನಗಾದ ಅನ್ಯಾಯಕ್ಕಾಗಿ ನ್ಯಾಯ ಕೇಳಿದ್ದೇನೆ. ಅದು ತಪ್ಪೇ ಎಂದು ಶಾಸಕ ಬಿ.ಕೆ.ಸಂಗಮೇಶ್ವರ್ ಹೇಳಿದರು.
ಸದನ ಪ್ರವೇಶಕ್ಕೆ ಮಾರ್ಷಲ್ ವಿರೋಧ ಒಡ್ಡಿದ್ದಕ್ಕೆ ಕೋಪಗೊಂಡ ಸಂಗಮೇಶ್ವರ್, ನ್ಯಾಯಕ್ಕಾಗಿ ಗಮನ ಸೆಳೆಯಲು ಶರ್ಟ್ ಬಿಚ್ಚಿದ್ದೆ. ಆದರೆ, ಸ್ಪೀಕರ್ ಪಕ್ಷಪಾತ ಹಾಗೂ ಸರ್ವಾಧಿಕಾರಿ ಧೋರಣೆಯನ್ನು ತೋರಿದ್ದಾರೆ ಎಂದು ಆರೋಪಿಸಿದರು.
ವಿಧಾನಸಭೆಗೆ ನನ್ನನ್ನು ಕಳುಹಿಸಿದ್ದು ನಮ್ಮ ಕ್ಷೇತ್ರದ ಭದ್ರಾವತಿ ಜನರೇ ವಿನಹ ಸ್ಪೀಕರ್ ಅಲ್ಲ. ಶಾಸಕನಾಗಿ ಯಾರ ಬಳಿ ನ್ಯಾಯ ಕೇಳಲಿ ಎಂದರು.
ಸ್ಪೀಕರ್ ಕಾಗೇರಿ, ಸಿಎಂ ಯಡಿಯೂರಪ್ಪ, ಸಚಿವ ಈಶ್ವರಪ್ಪ ವಿರುದ್ಧ ಧಿಕ್ಕಾರ ಕೂಗಿದರು.