ಸುದ್ದಿ ಕಣಜ.ಕಾಂ
ಶಿವಮೊಗ್ಗ: ಆಕಸ್ಮಿಕ ಬೆಂಕಿ ಅನಾಹುತವೊಂದರಲ್ಲಿ ಮಲವಗೊಪ್ಪದಲ್ಲಿಯ ಬೇಕರಿಯೊಂದು ಸುಟ್ಟು ಕರಕಲಾಗಿದೆ. ಗುರುವಾರ ತಡರಾತ್ರಿ ಸಂಭವಿಸಿದ ಅಗ್ನಿ ಅವಘಡದಲ್ಲಿ ಬೇಕರಿಯಲ್ಲಿದ್ದ ಸಾಮಗ್ರಿ, ತಿಂಡಿ, ತಿನಿಸು, ಪೀಠೋಕರಣ ಎಲ್ಲ ಸುಟ್ಟು ಕರಕಲಾಗಿದೆ.
ಇದನ್ನೂ ಓದಿ | ಮಲೆನಾಡ ಪ್ರವಾಸೋದ್ಯಮಕ್ಕೆ ಡಿಜಿಟಲ್ ಟಚ್!
ಫಲ ನೀಡದ ಸ್ಥಳೀಯರ ಯತ್ನ | ಬೆಂಕಿ ತಾಕಿ ಕೆನ್ನಾಲಿಗೆಯಾಗಿ ಇಡೀ ಬೇಕರಿ ಅಗ್ನಿಯಲ್ಲಿ ಉರಿಯುತ್ತಿತ್ತು. ಆಗ ಸಾರ್ವಜನಿಕರು ಸೇರಿ ಬೆಂಕಿ ನಂದಿಸುವ ಪ್ರಯತ್ನ ನಡೆಸಿದರು. ಆದರೆ, ಬೆಂಕಿಯ ತೀವ್ರತೆಯ ಎದುರು
ಅವರೆಲ್ಲರ ಪ್ರಯತ್ನ ವಿಫಲವಾಯಿತು. ಅಗ್ನಿಶಾಮಕ ದಳದ ಸಿಬ್ಬಂದಿ ಘಟನೆ ನಡೆದ ಸ್ಥಳಕ್ಕೆ ದೌಡಾಯಿಸಿದರು. ಒಂದು ಗಂಟೆ ಸತತ ಪ್ರಯತ್ನದಿಂದ ಅಗ್ನಿಶಾಮಕ ದಳದ ಸಿಬ್ಬಂದಿ ಬೆಂಕಿ ಆರಿಸಲು ಯಶಸ್ವಿಯಾಗಿದ್ದಾರೆ. ಆದರೆ, ಅಷ್ಟೊತ್ತಿಗಾಗಲೇ ಬೇಕರಿ ಬೆಂಕಿಗೆ ಆಹುತಿಯಾಗಿದೆ.
ಇದನ್ನೂ ಓದಿ | ಶಿವಮೊಗ್ಗದಲ್ಲಿ ಸೌತ್ ಆಫ್ರಿಕಾ ರೂಪಾಂತರ ಕೊರೊನಾ ವೈರಸ್ ಆತಂಕ, ಮೈ ಜುಮ್ಮೆನಿಸುವ ಸೋಂಕಿತನ ಟ್ರಾವೆಲ್ ಹಿಸ್ಟರಿ
ಸ್ಥಳೀಯರನ್ನು ಚದುರಿಸಿದ ಪೊಲೀಸರು | ಬೆಂಕಿ ತಾಕಿದರೂ ಜನ ಅದನ್ನು ವೀಕ್ಷಿಸುವುದಕ್ಕಾಗಿ ಸಮೀಪ ಬರುತ್ತಿದ್ದರು. ಎಷ್ಟೇ ತಿಳಿಹೇಳಿದರೂ ಪ್ರಯೋಜನವಾಗಲಿಲ್ಲ. ಹೀಗಾಗಿ , ಸುರಕ್ಷತೆ ದೃಷ್ಟಿಯಿಂದ ಪೊಲೀಸರು ಜನರನ್ನು ಚದುರಿಸಿದರು. ಅಗ್ನಿ ಅವಘಡಕ್ಕೆ ನಿಖರ ಕಾರಣ ಗೊತ್ತಾಗಿಲ್ಲ.