ಕೋವಿಡ್‍ನಿಂದ ಮೃತಪಟ್ಟ ವೃದ್ಧಗೆ ಮುಸ್ಲಿಂ ಯುವಕರಿಂದ ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ, ಎಲ್ಲಿ ನಡೀತು ಘಟನೆ?

 

 

ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲ್ಲೂಕಿನಲ್ಲಿ ಹಿಂದೂ ವೃದ್ಧೆಯೊಬ್ಬರಿಗೆ ಅಂತ್ಯಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಸೇರಿದಂತೆ ಯಾರೂ ಮುಂದೆ ಬರದಿದ್ದಾಗ ಮುಸ್ಲಿಂ ಯುವಕರ ತಂಡವೊಂದು ಹಿಂದೂ ಸಂಸ್ಕೃತಿಯಂತೆ ಅಂತ್ಯಸಂಸ್ಕಾರ ನಡೆಸಿದ ಘಟನೆ ಸೋಮವಾರ ನಡೆದಿದೆ.

READ | ಸಾವಿರ ಗಡಿ ದಾಟಿದ ಕೊರೊ‌ನಾ ಸೋಂಕು, ಶಿವಮೊಗ್ಗ ಟ್ರಿಪಲ್, ಭದ್ರಾವತಿಯಲ್ಲಿ ಡಬಲ್ ಸೆಂಚ್ಯೂರಿ, ಬೇರೆ ತಾಲೂಕಿನಲ್ಲಿ ವರದಿ ಇಲ್ಲಿದೆ

ತಾಲ್ಲೂಕಿನ ಚುಂಚಿನಕೊಪ್ಪ ಗ್ರಾಮದ ರುದ್ರಿಬಾಯಿ (57) ಕೊರೊನಾ ಸೋಂಕಿನಿಂದಾಗಿ ಚಿಕಿತ್ಸೆ ಫಲಕಾರಿಯಾಗದೇ ಭಾನುವಾರ ಮೃತಪಟ್ಟಿದ್ದರು. ಮಹಿಳೆಯ ಶವವನ್ನು ಆಂಬ್ಯುಲೆನ್ಸ್‍ನಲ್ಲಿ ಗ್ರಾಮಕ್ಕೆ ಸಾಗಿಸಲಾಗಿತ್ತು. ಆದರೆ, ಅಂತ್ಯ ಸಂಸ್ಕಾರ ಮಾಡಲು ಕುಟುಂಬದ ಸದಸ್ಯರೂ ಹಿಂದೆ ಸರಿದಿದ್ದರು.

ಈ ಸಂದರ್ಭದಲ್ಲಿ ಇಲ್ಲಿನ ಸಮಾಜ ಸೇವಕ ಮಹಮ್ಮದ್ ಇರ್ಫಾನ್ ಮತ್ತು ಅವರ ಸ್ನೇಹಿತರ ತಂಡ ಅಂತ್ಯ ಸಂಸ್ಕಾರ ಮಾಡಿ ಮಾನವೀಯತೆ ಮೆರೆದಿದೆ. ತಂಡದಲ್ಲಿಅಸ್ಲಾಂ, ಇಮ್ರಾನ್, ನವೀದ್, ರಹಮತ್, ಮೌಲಾನ ಅಶ್ವಕ್, ಮೌಲಾನಾ ಇಬ್ರಾಹಿಂ ಇದ್ದರು.

error: Content is protected !!