ಸುದ್ದಿ ಕಣಜ.ಕಾಂ
ಶಿಕಾರಿಪುರ: ತಾಲೂಕಿನ ಮಲ್ಲಪ್ಪನ ಕಟ್ಟೆ ದಡದಲ್ಲಿ ಕಳಭಟ್ಟಿ ಅಡ್ಡ ಮೇಲೆ ಅಬಕಾರಿ ಅಧಿಕಾರಿಗಳು ಮಂಗಳವಾರ ತಡರಾತ್ರಿ ದಾಳಿ ನಡೆಸಿದ್ದಾರೆ. ಈ ವೇಳೆ, ಇಬ್ಬರು ಆರೋಪಿಗಳು ಎಸ್ಕೇಪ್ ಆಗಿದ್ದಾರೆ.
ಮಳವಳ್ಳಿ ತಾಂಡ ನಿವಾಸಿಗಳಾದ ಬೀರಾ ನಾಯ್ಕ್ ಮತ್ತು ಆತನ ತಾಯಿ ಲೋಕಿ ಬಾಯಿ ಎಂಬುವವರು ಪರಾರಿಯಾಗಿದ್ದಾರೆ.
ಕಳಭಟ್ಟಿ ಕಾಯಿಸುತ್ತಿದ್ದಾಗ ಅಬಕಾರಿ ಇಲಾಖೆ ಅಧಿಕಾರಿಗಳಿಗೆ ಪಕ್ಕಾ ಮಾಹಿತಿ ಲಭಿಸಿದೆ. ತಕ್ಷಣ ಕಾರ್ಯಗತರಾದ ಅವರು ಕಳಭಟ್ಟಿ ಅಡ್ಡ ಮೇಲೆ ದಾಳಿ ನಡೆಸಿದ್ದಾರೆ. ಆರೋಪಿಗಳು ತಲೆಮರೆಸಿಕೊಂಡಿದ್ದು, 135 ಲೀಟರ್ ಬೆಲ್ಲದ ಕೊಳೆ, ಪರಿಕರಗಳನ್ನು ಜಪ್ತಿ ಮಾಡಲಾಗಿದೆ.
ಇದರೊಂದಿಗೆ ಸಿದ್ಧಪಡಿಸಿದ್ದ 9 ಲೀಟರ್ ಕಳಭಟ್ಟಿಯನ್ನು ವಶಕ್ಕೆ ಪಡೆಯಲಾಗಿದೆ. ಅಬಕಾರಿ ನಿರೀಕ್ಷಕ ಡಿ.ಎನ್.ಹನುಮಂತಪ್ಪ ನೇತೃತ್ವದಲ್ಲಿ ಅಬಕಾರಿ ಉಪ ನಿರೀಕ್ಷಕ ಪಿ.ಜೆ.ಜಾನ್, ಅಬಕಾರಿ ಹಿರಿಯ ಪೇದೆ ಚಂದ್ರಪ್ಪ, ವಾಹನ ಚಾಲಕ ಅರ್ಜುನ್, ಓಂಕಾರ್ ನಾಯಕ್ ಕಾರ್ಯಾಚರಣೆ ನಡೆಸಿದ್ದಾರೆ.