ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸ್ಮಾರ್ಟ್ ಸಿಟಿ ಕಾಮಗಾರಿಗಳನ್ನು ತರಾತುರಿಯಲ್ಲಿ ಮುಗಿಸಬೇಕು ಎಂಬ ಕಾರಣಕ್ಕೆ ನಗರದಾದ್ಯಂತ ರಸ್ತೆಗಳನ್ನು ಅಗೆಯಲಾಗಿದೆ. ಆದರೆ, ಇದು ಹಲವು ಅನಾಹುತಗಳನ್ನು ಸೃಷ್ಟಿಸಿದೆ.
https://www.suddikanaja.com/2020/11/14/%e0%b2%ae%e0%b2%b2%e0%b3%86%e0%b2%a8%e0%b2%be%e0%b2%a1%e0%b2%bf%e0%b2%a8%e0%b2%b2%e0%b3%8d%e0%b2%b2%e0%b2%bf-%e0%b2%b0%e0%b2%b8%e0%b3%8d%e0%b2%a4%e0%b3%86-%e0%b2%85%e0%b2%aa%e0%b2%98%e0%b2%be%e0%b2%a4/
ಒಳಚರಂಡಿ, ಚರಂಡಿ, ರಸ್ತೆ, ಪಾದಾಚಾರಿ ರಸ್ತೆಯ ಹೆಸರಿನಲ್ಲಿ ಯದ್ವಾತದ್ವ ಎಲ್ಲೆಂದರಲ್ಲಿ ಅಗೆಯಲಾಗಿದೆ. ಮಳೆಗಾಲಕ್ಕೂ ಮುನ್ನವೇ ಕಾಮಗಾರಿ ಮುಗಿಸದ ಕಾರಣಕ್ಕೆ ರಸ್ತೆಗಳು ಗುಂಡಿಗಳಿಂದ ಆವೃತವಾಗಿವೆ.
ವಾಹನ ಸಂಚಾರಕ್ಕೆ ಸಂಚಕಾರ | ಬಡಾವಣೆಗಳಲ್ಲಿ ನೆಟ್ಟಗಿದ್ದ ರಸ್ತೆಗಳನ್ನು ಅಗೆದು ಬಿಡಲಾಗಿದೆ. ಡಾಂಬಾರು ಕಾಣದೇ ಕೊಚ್ಚೆಯಿಂದಾಗಿ ವಾಹನ ಓಡಾಟಕ್ಕೆ ಸಮಸ್ಯೆ ಆಗುತ್ತಿದೆ.
ರಸ್ತೆಯ ಎರಡೂ ಬದಿಗಳಲ್ಲಿ ಪೈಪ್ ಲೈನ್ ಇತ್ಯಾದಿ ಕಾರಣಕ್ಕೆ ಅಗೆದಿರುವುದರಿಂದ ಟ್ರಾಕ್ಟರ್, ಕಾರು, ಟಿಪ್ಪರ್ ಓಡಾಡಿದ್ದಲ್ಲಿ ಗುಂಡಿಯಲ್ಲಿ ಸಿಲುಕುತ್ತಿವೆ. ನಿತ್ಯವೂ ಜನ ಹಿಡಿ ಶಾಪ ಹಾಕುತಿದ್ದಾರೆ.
ಕೆರೆಯಂತಾದ ರಸ್ತೆಗಳು | ಅಭಿವೃದ್ಧಿಯ ಹೆಸರಿನಲ್ಲಿ ರಸ್ತೆಗಳನ್ನೇನೋ ಅಗೆಯಲಾಗಿದೆ. ಆದರೆ, ಅವುಗಳಿನ್ನೂ ಕಾಂಟ್ರಿಟ್ ಕಂಡಿಲ್ಲ. ಹೀಗಾಗಿ, ಪ್ರಮುಖ ರಸ್ತೆಗಳಲ್ಲಿ ಮಳೆಯ ನೀರು ತುಂಬಿಕೊಂಡು ಹೊಂಡಗಳೇ ಏರ್ಪಟ್ಟಿವೆ.
ಇದಕ್ಕಾಗಿ, ಹಲವು ಸಂಘ, ಸಂಸ್ಥೆಗಳು ಮನವಿ ಮಾಡಿದರೂ ಸ್ಮಾರ್ಟ್ ಸಿಟಿಯವರು ಇತ್ತ ಗಮನ ಹರಿಸುತ್ತಿಲ್ಲ ಎನ್ನುವುದು ಸಾರ್ವಜನಿಕರ ಆರೋಪವಾಗಿದೆ.
→ CITIZEN REPORTER | SUNIL, SHIVAMOGGA
https://www.suddikanaja.com/2021/05/14/red-alert-in-shivamogga-avoid-bus-in-agumbe-ghat/