ಸುದ್ದಿ ಕಣಜ.ಕಾಂ
ಶಿವಮೊಗ್ಗ: ಜಿಲ್ಲೆಯ ಸಾಗರ, ಹೊಸನಗರದಲ್ಲಿ ವರುಣನ ಆರ್ಭಟ ಜೋರಾಗಿದೆ. ಶನಿವಾರ ಸುರಿದ ಧಾರಾಕಾ ಮಳೆಗೆ ಸಾಗರ ತಾಲೂಕಿನ ಹಲವೆಡೆ ಮರಗಳು ಧರೆಗುರುಳಿವೆ.
ರಸ್ತೆಯ ಮೇಲೆ ಮರ ಬಿದ್ದಿದ್ದರಿಂದ ವಾಹನಗಳು ಮುರುಘಾಮಠ- ಇಸ್ಲಾಂಪುರ, ಅಂದಾಸುರ ಮಾರ್ಗವಾಗಿ ಸಂಚರಿಸಿದವು.
ಹೊಸನಗರ, ತೀರ್ಥಹಳ್ಳಿ ಭಾಗದಲ್ಲೂ ಮಳೆ ಮುಂದುವರಿದಿದೆ. ಶಿವಮೊಗ್ಗದಲ್ಲಿ ಭಾನುವಾರ ಬೆಳಗ್ಗೆಯಿಂದ ಮೋಡ ಕವಿದ ವಾತಾವರಣವಿದ್ದು, ಮಳೆ ಅಲ್ಪ ವಿರಾಮ ನೀಡಿದೆ. ಆದರೆ, ತುಂಗೆಯ ಆರ್ಭಟ ಮುಂದುವರಿದಿದೆ.
https://www.suddikanaja.com/2021/01/06/rainfall-in-shivamogga-malenadu/