ಸುದ್ದಿ ಕಣಜ.ಕಾಂ | DISTRICT | APPEMIDI MANGO
ಶಿವಮೊಗ್ಗ: ‘ಅಪ್ಪೆಮಿಡಿ’ ಮಲೆನಾಡಿನ ಅಸ್ಮಿತೆ, ಸಾಂಸ್ಕೃತಿಕ ರಾಯಭಾರಿ. ಇದರ ಉಪ್ಪಿನಕಾಯಿ ಎಂದರೆ ಎಂತಹವರ ಬಾಯಿಗೂ ನೀರು ಬರುತ್ತದೆ. ಈ ಉಪ್ಪಿನಕಾಯಿಯ ರಾಜನಿಗೆ ಈಗ ರಾಷ್ಟ್ರೀಯ ಮಾನ್ಯತೆ ದೊರೆತಿದೆ. ಈ ಮೂಲಕ ಮಲೆನಾಡಿಗಷ್ಟೇ ಸೀಮಿತವಾಗಿದ್ದ ಇದರ ಖ್ಯಾತಿ ಈಗ ವಿಶ್ವವ್ಯಾಪಿ ಪಸರಿಸಲಿದೆ.
ನಗರದ ಪತ್ರಿಕಾ ಭವನದಲ್ಲಿ ಮಂಗಳವಾರ ಆಯೋಜಿಸಿದ್ದ ಕಾರ್ಯಕ್ರಮದಲ್ಲಿ ‘ಅಪ್ಪೆಮಿಡಿ’ ಮಾವಿನ ಕಾಯಿಯ ವಿಶೇಷ ಲಕೋಟೆಯನ್ನು ಬಿಡುಗಡೆ ಮಾಡಲಾಯಿತು.
ಅಂಚೆ ಇಲಾಖೆಯ ದಕ್ಷಿಣ ಕರ್ನಾಟಕ ವಲಯದ ಪೋಸ್ಟ್ ಮಾಸ್ಟರ್ ಜನರಲ್ ಡಿ.ಎಸ್.ವಿ.ಆರ್. ಮೂರ್ತಿ ಅಪ್ಪೆಮಿಡಿ ಮಾವಿನಕಾಯಿ ವಿಶೇಷ ಅಂಚೆ ಲಕೋಟೆಯನ್ನು ಲೋಕಾರ್ಪಣೆಗೊಳಿಸಿದರು.
https://www.suddikanaja.com/2021/07/22/national-highway-in-worst-condition-which-connect-through-western-ghat/
ಪ್ರದೇಶ ಬೆಳೆಗೆ ಸಂದ ಗೌರವ
ಲಕೋಟೆ ಬಿಡುಗಡೆಗೊಳಿಸಿ ಮಾತನಾಡಿದ ಡಿ.ಎಸ್.ವಿ.ಆರ್. ಮೂರ್ತಿ, ‘ಇದು ಭೌಗೋಳಿಕ ಪ್ರದೇಶ ಬೆಳೆಗೆ ಸಂದ ಗೌರವವಾಗಿದೆ. ಕೇವಲ ರಾಷ್ಟ್ರಮಟ್ಟದಲ್ಲಿ ಮಾತ್ರವಲ್ಲ. ಅಂತರ ರಾಷ್ಟ್ರೀಯ ಮಟ್ಟದಲ್ಲೂ ‘ಅಪ್ಪೆಮಿಡಿ ಮಾವಿನಕಾಯಿ’ ಮಹತ್ವ ಪ್ರಚೂರಗೊಳ್ಳಲಿದೆ. ಇದರಿಂದ ರೈತರಿಗೂ ಅನುಕೂಲ ಆಗಲಿದೆ. ಮಲೆನಾಡು ಭಾಗದ ರೈತರ ಕನಸು ಈ ಮೂಲಕ ಸಾಕಾರಗೊಂಡಿದೆ. ಇದಕ್ಕೆ ಈಗ ಜಿಐ 132 ಮಾನ್ಯತೆ ಸಿಕ್ಕಿದೆ’ ಎಂದರು.
READ | ಭದ್ರಾವತಿಯಲ್ಲಿ ಮತ್ತೆ ಪುಂಡಾನೆ ದಾಳಿ, ಮಾಜಿ ಸಿಎಂ ಯಡಿಯೂರಪ್ಪ ಸೇರಿ ಹಲವರ ತೋಟದ ಕಾಂಪೌಂಡ್ ಧ್ವಂಸ ಮಾಡಿದ ಒಂಟಿ ಸಲಗ
ಅಪ್ಪೆಮಿಡಿ, ಜಿಐ ಮಾನ್ಯತೆ ಬಗ್ಗೆ ಯಾರು ಏನೆಂದರು?
ಅಪ್ಪೆ ಮಿಡಿ ಮಾವಿನಕಾಯಿ ಸಾಗರ ಮತ್ತು ಸುತ್ತಮುತ್ತಲ ಪ್ರದೇಶದ ವಿಶೇಷ ಬೆಳೆಯಾಗಿದೆ. ನೂರಾರು ವರ್ಷಗಳಿಂದ ಇದನ್ನು ಬೆಳೆಯುತ್ತಿದ್ದಾರೆ. ಉದ್ಯಮಿಯಾಗಿ ಅಪ್ಪೆಮಿಡಿಯನ್ನು ಪರಿಚಯಿಸಬೇಕು ಎನ್ನುವ ಕಾರಣಕ್ಕೆ ಹಲವು ವರ್ಷಗಳಿಂದ ಅಂಚೆ ಇಲಾಖೆ ಮೂಲಕ ಪ್ರಯತ್ನಿಸಲಾಗಿತ್ತು. ಅದು ಈಗ ಕೈಗೂಡಿದೆ.
– ಗಣೇಶ್ ಕಾಕಲ್, ಕಾಕಲ್ ಇಂಡಸ್ಟ್ರೀಸ್, ಸಾಗರಮಲೆನಾಡಿನ ಅತ್ಯಂತ ವಿಶಿಷ್ಟಚಾದ ಬೆಳೆ ಅಪ್ಪೆಮಿಡಿಯಾಗಿದೆ. ಈಗ ಅಂಚೆ ಇಲಾಖೆ ಇದಕ್ಕೊಂದು ಮನ್ನಣೆ ನೀಡಿದೆ. ರಾಷ್ಟ್ರವಲ್ಲದೇ, ಅಂತರ ರಾಷ್ಟ್ರೀಯ ಮಟ್ಟದಲ್ಲೂ ಕೂಡ ಅಪ್ಪೆಮಿಡಿಗೆ ಬೆಲೆ ಬರುವ ಸಾಧ್ಯತೆ ಇದೆ. ಅಪ್ಪೆಮಿಡಿ ತಳಿಗಳ ಉಳಿವುಗೂ ಇದು ಪೂರಕವಾಗಲಿದೆ.
– ಜಿ. ಹರೀಶ್, ಶಿವಮೊಗ್ಗ ವಿಭಾಗದ ಅಂಚೆ ಅಧೀಕ್ಷಕಇಲಾಖೆಯು ಮಲೆನಾಡಿನಲ್ಲಿ ಬೆಳೆಯುತ್ತಿದ್ದ ಅಪ್ಪೆಮಿಡಿಯನ್ನು ಗುರುತಿಸಿ ರೈತರಿಗೆ ಪ್ರೋತ್ಸಾಹ ಕೂಡ ನೀಡಿತ್ತು. 2009ರಲ್ಲಿಯೇ ಇದನ್ನು ಪ್ರಾದೇಶಿಕ ಬೆಳೆಯನ್ನಾಗಿ ಗುರುತಿಸಲಾಗಿತ್ತು. ಈಗ ಅಂಚೆ ಇಲಾಖೆಯ ಮೂಲಕ ಇದರ ಮಹತ್ವ ಮತ್ತಷ್ಟು ಹೆಚ್ಚಿದೆ.
– ಡಾ.ರಾಮಚಂದ್ರ ಮಡಿವಾಳ, ಡಿಡಿ, ತೋಟಗಾರಿಕೆ ಇಲಾಖೆ
ಭದ್ರಾವತಿ ಎಂಪಿಎಂ ಅಂಚೆ ಕಚೇರಿಯ ಸಂಯೋಜಿತ ಪೋಸ್ಟ್ ಮಾಸ್ಟರ್ ಎನ್.ಎಸ್.ಪ್ರೀತಿ, ಅಂಚೆ ಉಪ ಅಧೀಕ್ಷಕಿ ಉಷಾ ಉಪಸ್ಥಿತರಿದ್ದರು. ಭದ್ರಾವತಿ ಮುಖ್ಯಅಂಚೆ ಕಚೇರಿ ಪೋಸ್ಟ್ ಮಾಸ್ಟರ್ ಶಶಿಧರ್ ಸ್ವಾಗತಿಸಿದರು. ರಾಘವೇಂದ್ರ ಹವಳೇರ್ ನಿರೂಪಿಸಿದರು. ಕೃಷ್ಣಾ ಕುಮಾರಿ ಪ್ರಾರ್ಥಿಸಿದರು.
https://www.suddikanaja.com/2021/03/24/fir-against-rakesh-tikait-in-kote-police-station/