ಹೋಟೆಲ್ ನಲ್ಲಿ ಊಟ ಮುಗಿಸಿ ಬರುವ ಹೊತ್ತಿಗೆ ಬೈಕ್ ಮಾಯ!

 

 

ಸುದ್ದಿ ಕಣಜ.ಕಾಂ | CITY | CRIME
ಶಿವಮೊಗ್ಗ: ಇಲ್ಲಿನ ಕೆ.ಎಸ್.ಆರ್.ಟಿ.ಸಿ. ಬಸ್ ನಿಲ್ದಾಣ ಸಮೀಪದ ಹೋಟೆಲ್ ವೊಂದರಲ್ಲಿ ಊಟ ಮುಗಿಸಿ ವಾಪಸ್ ಬರುವ ಹೊತ್ತಿಗೆ ಬೈಕ್ ಕಳವಾಗಿದೆ.
ಸಂತೆಕಡೂರು ನಿವಾಸಿ ಉಮೇಶ್ ಎಂಬುವವರಿಗೆ ಸೇರಿದ ಬೈಕ್ ಕಳ್ಳತನ ಮಾಡಲಾಗಿದೆ.‌ ಸ್ನೇಹಿತನೊಂದಿಗೆ ಹೋಟೆಲ್ ಗೆ ಹೋಗಿದ್ದ ಇವರು ಒಂದು ಗಂಟೆಯಲ್ಲಿ ವಾಪಸಾಗಿದ್ದಾರೆ. ಅಷ್ಟೊತ್ತಿಗೆ ಹೋಂಡಾ ಶೈನ್ ಬೈಕ್ ಕಳವಾಗಿದೆ. ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!