ಹಾಡಹಗಲೆ ರೌಡಿಶೀಟರ್ ಮರ್ಡರ್, ಬೆಚ್ಚಿಬಿದ್ದ ಜನ

 

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದ ಬಸವನಗುಡಿಯಲ್ಲಿ  ಸೋಮವಾರ ಮಧ್ಯಾಹ್ನರೌಡಿಶೀಟರ್ ವೊಬ್ಬನಿಗೆ ಮಚ್ಚಿನಿಂದ ತಲೆ ಭಾಗಕ್ಕೆ ಕೊಚ್ಚಿ ಕೊಲೆ ಮಾಡಲಾಗಿದೆ.

ರಾಗಿಗುಡ್ಡ ನಿವಾಸಿ ಮಂಜುನಾಥ್ (35) ಕೊಲೆಯಾದ ರೌಡಿ ಎಂದು ತಿಳಿದುಬಂದಿದೆ.
ಬಸವನಗುಡಿ ಐದನೇ ಕ್ರಾಸ್ ನಲ್ಲಿ ಕೊಲೆ ನಡೆದಿದ್ದು, ದುಷ್ಕರ್ಮಿಗಳು ಬೈಕ್ ನಲ್ಲಿ ಬಂದು ಹಲ್ಲೆ ಮಾಡಿ‌ ಪರಾರಿ ಆಗಿದ್ದಾರೆ ಎನ್ನಲಾಗಿದೆ.
ಹಳೆ ವೈಷಮ್ಯ ಹಿನ್ನೆಲೆ ಮಚ್ಚಿನಿಂದ ಬರ್ಬರವಾಗಿ ಕೊಲೆ ಮಾಡಿರಬಹುದೆಂದು ಪೊಲೀಸರು ಶಂಕಿಸಿದ್ದಾರೆ.
ಮಂಜುನಾಥ್ ಸಹ ಕೊಲೆ ಪ್ರಕರಣಗಳಲ್ಲಿ ಭಾಗಿಯಾಗಿರುವ ಬಗ್ಗೆ ಪ್ರಕರಣ ದಾಖಲಾಗಿವೆ. ಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಘಟನಾ ಸ್ಥಳಕ್ಕೆ ಎಸ್.ಪಿ. ಕೆ.ಎಂ.ಶಾಂತರಾಜು, ಎಎಸ್.ಪಿ ಎಚ್.ಟಿ.ಶೇಖರ್, ಡಿವೈಎಸ್.ಪಿ ಉಮೇಶ್ ಈಶ್ವರ ನಾಯ್ಕ, ಜಯನಗರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದರು.

Leave a Reply

Your email address will not be published. Required fields are marked *

error: Content is protected !!