ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದಲ್ಲಿ ಕಳ್ಳತನ ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಆಗುತ್ತಲೇ ಇದೆ. ಗೋಪಾಳಗೌಡ ಬಡಾವಣೆಯಲ್ಲಿ ಮನೆಯೊಂದರ ಬೀಗ ಮುರಿದು ದುಬಾರಿ ವಸ್ತುಗಳನ್ನು ದೋಚಿ ಖದೀಮರು ಪರಾರಿಯಾಗಿದ್ದಾರೆ.
ಗೋಪಾಲಗೌಡ ಬಡಾವಣೆಯ ಇ ಬ್ಲಾಕ್ನಲ್ಲಿರುವ ಮಂಜಪ್ಪಗೌಡ ಎಂಬುವವರ ಮನೆಯಲ್ಲಿ ಚಿನ್ನಾಭರಣ, ಸೀರೆಗಳು, ದುಬಾರಿ ವಾಚ್ ಕಳವು ಮಾಡಲಾಗಿದೆ.
READ | ಬೈಕ್ ಕಳ್ಳರ ಜಾಡು ಹಿಡಿದು ಹೋದಾಗ ಪೊಲೀಸರಿಗೆ ಶಾಕ್, 8 ತಿಂಗಳ ಬಳಿಕ ಸಿಕ್ತು ಬೈಕ್ ಕಳ್ಳರ ಗ್ಯಾಂಗ್
ತೋಟಕ್ಕೆ ಹೋದಾಗ ಮನೆಯಲ್ಲಿ ಕಳವು
ಮಂಜಪ್ಪಗೌಡ ಅವರು ಹೊಸನಗರದಲ್ಲಿರುವ ತೋಟಕ್ಕೆ ಹೋದಾಗ ಮನೆಗೆ ಬೀಗ ಹಾಕಿಕೊಂಡು ಹೋಗಿದ್ದರು. ಆಗ ಕಳ್ಳತನ ಮಾಡಲಾಗಿದೆ.
ಮನೆಯಲ್ಲಿ ಏನೇನು ಕಳ್ಳತನ?
ಚಿನ್ನದ 30 ಗ್ರಾಂ ಎರಡು ಚೈನ್, ಪೆಂಡೆಂಟ್, 8 ಗ್ರಾಂನ ಮಕ್ಕಳ ಚೈನ್, 5 ಗ್ರಾಂ ಮಾಣಿಕ್ಯ ಹರಳಿನ ರಿಂಗ್, 3 ಗ್ರಾಂ ಮಕ್ಕಳ ಕಿವಿಯೋಲೆ, 15 ಗ್ರಾಂ ನ 3 ಜೊತೆ ಕಿವಿಯೋಲೆಗಳನ್ನು ಕಳ್ಳತನ ಮಾಡಲಾಗಿದೆ.
₹25 ಸಾವಿರ ಮೌಲ್ಯದ ರೇಷ್ಮೆ ಸೀರೆಗಳು, ₹30 ಸಾವಿರ ಮೌಲ್ಯದ ಎರಡು ಗಡಿಯಾರಗಳನ್ನು ಕಳ್ಳತನ ಮಾಡಲಾಗಿದೆ. ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
https://www.suddikanaja.com/2021/05/31/theft-in-shop-during-lockdown-in-shivamogga/