ಸಾಕು ಮೊಲಗಳ ಭಕ್ಷಿಸಿದ ನಾಗಪ್ಪನಿಗೆ ಅರಣ್ಯ ವಾಸ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಪ್ರೀತಿಯಿಂದ ಸಾಕಿದ್ದ ಏಳು ಮೊಲಗಳನ್ನು ತನ್ನ ನಂಜಿನಿಂದ ಸಾಯಿಸಿದ್ದ ನಾಗರ ಹಾವನ್ನು ಹಿಡಿದು ಅರಣ್ಯಕ್ಕೆ ಅಟ್ಟಲಾಗಿದೆ.
ನಗರದ ತುಂಗಾ ಏತ ನೀರಾವರಿ ಜಾಕ್ ವೆಲ್ ಕಚೇರಿಯಲ್ಲಿ ಕೆಲಸಗಾರನೊಬ್ಬ ಮೊಲಗಳನ್ನು ಸಾಕಿದ್ದ. ಆಗ ಮೊಲಗಳಿದ್ದ ಜಾಗಕ್ಕೆ ಬಂದ ನಾಗರ ಹಾವು ಮೂರು ಮೊಲಗಳನ್ನು ನುಂಗಿದೆ. ನಂತರ, ನಾಲ್ಕಕ್ಕೆ ಕಚ್ಚಿ ಸಾಯಿಸಿದೆ.
ತಕ್ಷಣ ಸ್ನೇಕ್ ಕಿರಣ್ ಅವರನ್ನು ಕರೆ ಮಾಡಿದ್ದು, ಅವರು ಹಾವನ್ನು ಹಿಡಿದು ರಕ್ಷಿಸಿ, ಕಾಡಿಗೆ ಬಿಟ್ಟಿದ್ದಾರೆ.

Leave a Reply

Your email address will not be published. Required fields are marked *

error: Content is protected !!