ಸುದ್ದಿ ಕಣಜ.ಕಾಂ ಶಿವಮೊಗ್ಗ
000: ಶಿವಮೊಗ್ಗ ನಗರ ವಿಧಾನಸಭೆ ಕ್ಷೇತ್ರದಿಂದ ವಿಜೇತರಾದ ಬಿಜೆಪಿಯ ಅಭ್ಯರ್ಥಿ ಎಸ್.ಎನ್.ಚನ್ನಬಸಪ್ಪ (ಚನ್ನಿ) ಬಗ್ಗೆ ತಿಳಿದುಕೊಳ್ಳಲೇಬೇಕಾದ ವಿಚಾರಗಳಿವು.
ಜನರಿಂದ ಪ್ರೀತಿಯಿಂದ ಚನ್ನಿ ಎಂದು ಕರೆಸಿಕೊಳ್ಳುವ ಇವರು ಪ್ರಖರ ಹಿಂದುತ್ವವಾದಿ. ಇದುವರೆಗೆ ಶಿವಮೊಗ್ಗ ಮಹಾನಗರ ಪಾಲಿಕೆಯಲ್ಲಿ ಸೇವೆ ಸಲ್ಲಿಸಿದ್ದು, ವಿಧಾನಸಭೆಗೆ ಪ್ರವೇಶಿಸಿದ್ದಾರೆ.
- ಇವರು ಮೊದಲು ಎದುರಿಸಿದ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ ಸೋತಿದ್ದರು. ಆದರೆ, ವಿಧಾನಸಭೆ ಚುನಾವಣೆಯಲ್ಲಿ ಪ್ರಥಮ ಪ್ರಯತ್ನದಲ್ಲೇ ಜಯಭೇರಿ ಬಾರಿಸಿದ್ದಾರೆ.
- 1975ರ ತುರ್ತು ಪರಿಸ್ಥಿತಿಯಲ್ಲಿ 12 ವರ್ಷದವರಾಗಿದ್ದ ಚನ್ನಿ ರಹಸ್ಯವಾಗಿ ಮಧ್ಯರಾತ್ರಿಯಲ್ಲಿ ಪತ್ರಿಕೆಗಳನ್ನು ಹಾಕುತಿದ್ದರು. ಪೊಲೀಸರು ಹಿಡಿದು ವಿಚಾರಿಸಿದಾಗ ಸೆಕೆಂಡ್ ಶೋ ಫಿಲಂಗೆ ಹೋಗಿದ್ದೆ ಎಂದು ಹೇಳಿ ತಪ್ಪಿಸಿಕೊಂಡಿಸಿದ್ದರು.
- ಅದಮ್ಯ, ಶ್ರೀಗಂಧ, ಕೋಟೆ ಯುವಕರ ಸಂಘ, ನಿನಾದ, ರಂಗ ಪ್ರಯೋಗ, ಅಭಿನಯ ಹೀಗೆ ಚನ್ನಿಯವರದ್ದು ಬಹುಮುಖ ಪ್ರತಿಭೆ. ಕಲೆ, ಸಂಸ್ಕೃತಿಯಲ್ಲೂ ವಿಶೇಷ ಪ್ರೀತಿ ಇದೆ.
- 1989ರಲ್ಲಿ ರಾಜಕೀಯ ಪ್ರವೇಶಿಸಿದ ಇವರು ಮೊದಲ ಸಲ ಜಯ ಕಂಡಿದ್ದು 1992ರ ಸ್ಥಳೀಯ ಸಂಸ್ಥೆ ಚುನಾವಣೆಯಲ್ಲಿ. ಏಳು ಚುನಾವಣೆಗಳನ್ನು ಎದುರಿಸಿ ನಾಲ್ಕು ಸಲ ವಿಜೇತರಾಗಿದ್ದಾರೆ.