ಎಟಿಎಂನಿಂದ ಹಣ ಪಡೆಯಲು ಸಹಾಯ ಮಾಡಿ, ಹೊಳೆಹೊನ್ನೂರು ರೈತನಿಗೆ 35 ಸಾವಿರ ರೂ. ಟೋಪಿ ಹಾಕಿದ ಭೂಪ, ಹೇಗೆ ನಡೀತು ಘಟನೆ ಗೊತ್ತಾ?

 

 

ಸುದ್ದಿ ಕಣಜ.ಕಾಂ

ಶಿವಮೊಗ್ಗ: ಹಣ ಡ್ರಾ ಮಾಡಲು ಸಹಾಯ ಮಾಡಿದ ವ್ಯಕ್ತಿಯೊಬ್ಬರು ರೈತನಿಗೆ 35 ಸಾವಿರ ರೂಪಾಯಿ ಮೋಸ ಮಾಡಿದ್ದಾರೆ.
ಹೊಳೆಹೊನ್ನೂರು ರೈತರೊಬ್ಬರು ಅಪರಿಚಿತ ವ್ಯಕ್ತಿಯೊಬ್ಬರಿಂದ ಎಟಿಎಂನಿಂದ ಹಣ ಪಡೆಯುವುದಕ್ಕೆ ಸಹಾಯ ಪಡೆದಿದ್ದಾರೆ. ಆ ವೇಳೆ, ವ್ಯಕ್ತಿಗೆ ರೈತನು ಎಟಿಎಂ ಕಾರ್ಡ್‌ ನೀಡಿದ್ದು, ಹಣ ಡ್ರಾ ಮಾಡಿದ ಬಳಿಕ ಡಮ್ಮಿ ಎಟಿಎಂ ಕಾರ್ಡ್‌ ನೀಡಿ ಆರೋಪಿ ಅಲ್ಲಿಂದ ಹೋಗಿದ್ದಾರೆ. ನಂತರ ಅದೇ ಎಟಿಎಂ ಬಳಸಿ ಸಾಗರದ ಎಟಿಎಂವೊಂದರಲ್ಲಿ ಹಣ ಡ್ರಾ ಮಾಡಿದ್ದಾನೆ. ಅಕೌಂಟ್‌ ನಿಂದ ಹಣ ಕಡಿತಗೊಂಡ ವಿಚಾರ ಗೊತ್ತಾಗುತ್ತಿದ್ದಂತೆಯೇ ಕೋಟೆ ಪೊಲೀಸ್‌ ಠಾಣೆಯಲ್ಲಿಪ್ರಕರಣ ದಾಖಲಿಸಲಾಗಿದೆ. ಆರೋಪಿಯ ಬಗ್ಗೆ ಇದುವರೆಗೆ ಯಾವುದೇ ಮಾಹಿತಿ ಲಭ್ಯವಾಗಿಲ್ಲ.

error: Content is protected !!