ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಷ್ಟ್ರೀಯ ಆಯುಷ್ ಅಭಿಯಾನದ ಆಯುಷ್ಮಾನ್ ಭಾರತ್ ಯೋಜನೆಯಡಿಯಲ್ಲಿ ಹೆಲ್ತ್ ಆ್ಯಂಡ್ ವೆಲ್ನೆಸ್ ಸೆಂಟರ್(health and wellness centre)ಗಳನ್ನಾಗಿ ಮೇಲ್ದರ್ಜೆಗೇರಿಸಲಾದ ಶಿವಮೊಗ್ಗ ಜಿಲ್ಲೆಯಲ್ಲಿನ ಸರ್ಕಾರಿ ಆಯುರ್ವೇದ ಚಿಕಿತ್ಸಾಲಯಗಳಲ್ಲಿ ಉದ್ಯೋಗ ಅವಕಾಶವಿದ್ದು, ಆಸಕ್ತ ಮತ್ತು ಅರ್ಹರು ನೇರ ಸಂದರ್ಶನಕ್ಕೆ ಹಾಜರಾಗಬಹುದು.
READ | ಎಸ್.ಎಸ್.ಎಲ್.ಸಿ ಪಾಸ್ ಆದವರಿಗೆ ಶಿವಮೊಗ್ಗದಲ್ಲಿ ಉದ್ಯೋಗ ಅವಕಾಶ
ಎಲ್ಲೆಲ್ಲಿ ಉದ್ಯೋಗ ಅವಕಾಶ?
ತೀರ್ಥಹಳ್ಳಿ ತಾಲೂಕು ಸಾಲೂರು, ಹೊಸನಗರದ ಪುರಪ್ಪೆಮನೆ, ಹರತಾಳು, ಭದ್ರಾವತಿಯ ಮೈದೊಳಲು, ಹನುಮಂತಾಪುರ ಇಲ್ಲಿಗೆ 2 ಯೋಗ ತರಬೇತುದಾರರ ಸೇವೆಯನ್ನು 11 ತಿಂಗಳ ಅವಧಿಗಾಗಿ ಪಡೆಯುತ್ತಿದ್ದು, ಆಸಕ್ತರು ಮಾ.8 ರಂದು ಮಧ್ಯಾಹ್ನ 2.30 ರಿಂದ 4 ರವರೆಗೆ ನಡೆಯುವ ನೇರ ಸಂದರ್ಶನದಲ್ಲಿ ಭಾಗವಹಿಸುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿಗದಿತ ನಮೂನೆ ಅರ್ಜಿಯನ್ನು ಅಂದು ಬೆಳಗ್ಗೆ 10 ರಿಂದ 12.30ರವರಗೆ ಜಿಲ್ಲಾ ಆಯುಷ್ ಕಚೇರಿಯಲ್ಲಿ ಪಡೆದುಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಜಿಲ್ಲಾ ಆಯುಷ್ ಕಚೇರಿ ದೂ.ಸಂ.: 08182-255230ನ್ನು ಸಂಪರ್ಕಿಸುವುದು.