ಸುದ್ದಿ ಕಣಜ.ಕಾಂ | KARNATAKA | CINEMA
ಶಿವಮೊಗ್ಗ: ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ 55ನೇ ಚಿತ್ರದ ಟೈಟಲ್ ಅನ್ನು ಸಾಮಾಜಿಕ ಜಾಲತಾಣಗಳಲ್ಲಿ ಅಧಿಕೃತವಾಗಿ ಘೋಷಿಸಲಾಗಿದೆ.
ಗಣೇಶ ಚತುರ್ಥಿ ಮುನ್ನಾ ದಿನವಾದ ಗುರುವಾರ ಸಾಮಾಜಿಕ ಜಾಲತಾಣಗಳಲ್ಲಿ ‘ಮೀಡಿಯಾ ಹೌಸ್ ಸ್ಟುಡಿಯೋ ಬತ್ತಳಿಕೆಯಿಂದ ಬರಲಿರುವ #D55 ಚಿತ್ರದ ಶೀರ್ಷಿಕೆ ಅನಾವರಣಗೊಳ್ಳಲಿದೆ’ ಎಂದು ಘೋಷಿಸಲಾಗಿತ್ತು. ಇದಕ್ಕೆ ಅಭಿಮಾನಿಗಳು ಫಿದಾ ಆಗಿದ್ದರು. ಆ ಟ್ವೀಟ್ ಹಲವು ರೀಟ್ವೀಟ್ ಆಗಿದ್ದು ಲೈಕ್ಸ್ ಕೂಡ ಬಂದಿವೆ.
ಚತುರ್ಥಿಯಂದು ಟೈಟಲ್ ಲಾಂಚ್
ಎಲ್ಲೆಡೆ ವಿಘ್ನ ನಿವಾರಕನ ಪೂಜೆ ಬಲು ಜೋರಾಗಿ ನಡೆದಿದೆ. ಇದರ ನಡುವೆ ಡಿ-ಬಾಸ್ ಮತ್ತೊಂದು ಅಭಿಮಾನಿಗಳಿಗೆ ಖುಷಿಯ ಸುದ್ದಿ ನೀಡಿದ್ದು, ತಮ್ಮ 55ನೇ ಸಿನಿಮಾದ ಟೈಟಲ್ ಲಾಂಚ್ ಮಾಡಿದ್ದಾರೆ. ಬೆಳಗ್ಗೆ 9 ಗಂಟೆಗೆ ಪೋಸ್ಟರ್ ಅನಾವರಣಗೊಳಿಸಲಾಗಿದೆ.
ಚಿತ್ರಕ್ಕೆ ‘ಕ್ರಾಂತಿ’ ಎನ್ನುವ ಹೆಸರನ್ನು ಇಡಲಾಗಿದ್ದು, ಕನ್ನಡ ಮಾತ್ರವಲ್ಲದೇ ನಾನಾ ಭಾಷೆಗಳಲ್ಲೂ ಪೋಸ್ಟರ್ ರಿಲೀಸ್ ಆಗಿದೆ. ರಾಬರ್ಟ್ ಹವಾ ಇನ್ನೂ ಇರುವಾಗಲೇ ಮತ್ತೊಂದು ‘ಕ್ರಾಂತಿ’ಯನ್ನು ದರ್ಶನ್ ಎಬ್ಬಿಸಿದ್ದಾರೆ.
ಕ್ರಾಂತಿ ಚಿತ್ರವನ್ನು ವಿ. ಹರಿಕೃಷ್ಣ ಅವರು ನಿರ್ದೇಶಿಸುತಿದ್ದು, ಶೈಲಜಾ ನಾಗ್ ಮತ್ತು ಬಿ. ಸುರೇಶ್ ನಿರ್ಮಾಣ ಮಾಡಲಿದ್ದಾರೆ.
ಶುಭ ಕೋರಿದ ಚಿತ್ರ ತಂಡ
ಪೋಸ್ಟರ್ ಬಿಡುಗಡೆಗೊಳಿಸಿ ‘ಎಲ್ಲರಿಗೂ ಗೌರಿ ಗಣೇಶ ಹಬ್ಬದ ಹಾರ್ದಿಕ ಶುಭಾಶಯ ಕೋರಲಾಗಿದೆ. ಮುಂದಿನ ಚಿತ್ರಕ್ಕೆ ‘ಕ್ರಾಂತಿ’ ಎಂಬ ಶೀರ್ಷಿಕೆ ಅಂತಿಮಗೊಳಿಸಲಾಗಿದೆ’ ಎಂದು ತಿಳಿಸಿದ್ದಾರೆ.