ಇಂದು, ನಾಳೆ ಎರಡು ದಿನ ಬ್ಯಾಂಕ್ ಬಂದ್, ಎಟಿಎಂಗಳಲ್ಲಿ ನೋ ಕ್ಯಾಶ್ ಸಾಧ್ಯತೆ

 

 

ಸುದ್ದಿ ಕಣಜ.ಕಾಂ | DISTRICT | BANK PROTEST
ಶಿವಮೊಗ್ಗ: ಬುಧವಾರ ಸಂಜೆ ಕಾರ್ಮಿಕ ಇಲಾಖೆಯೊಂದಿಗೆ ನಡೆದ ಸಂಧಾನ ಮಾತುಕತೆ ವಿಫಲ ಹಿನ್ನೆಲೆ ಈ ಮುಂಚೆಯೇ ನಿಗದಿಪಡಿಸಿದಂತೆ ಬ್ಯಾಂಕ್ ಮುಷ್ಕರ ನಡೆಯಲಿದೆ.
ಬ್ಯಾಂಕ್ ಗಳ ಖಾಸಗೀಕರಣದ ಪ್ರಸ್ತಾವನೆ ವಿರೋಧಿಸಿ ಡಿಸೆಂಬರ್ 16 ಮತ್ತು 17ರಂದು ರಾಷ್ಟ್ರವ್ಯಾಪಿ ಬಂದ್ ಗೆ ಬ್ಯಾಂಕ್ ನೌಕರರ ಸಂಘಟನೆಗಳು ಕರೆ ನೀಡಿದ್ದು, ಎರಡು ದಿನ ವಹಿವಾಟು ಸ್ಥಗಿತವಾಗಲಿದೆ.

ಗುರುವಾರ ಬೆಳಗ್ಗೆಯಿಂದಲೇ ಬ್ಯಾಂಕ್ ನೌಕರರು ತಮ್ಮ ಬ್ಯಾಂಕ್ ಗಳ ಮುಂಭಾಗದಲ್ಲಿ ಪ್ರತಿಭಟನೆ ಮಾಡುತ್ತಿದ್ದು, ಸರ್ಕಾರದ ನೀತಿಯನ್ನು ಖಂಡಿಸಿದ್ದಾರೆ.

ಬ್ಯಾಂಕ್ ಮುಷ್ಕರ ಹಿನ್ನೆಲೆ ಎರಡು ದಿನ ಬ್ಯಾಂಕ್ ಗಳ ವಹಿವಾಟು ಸ್ಥಗಿತಗೊಳ್ಳಲಿದೆ. ಆದರೆ, ಮೊಬೈಲ್ ಮತ್ತು ಇಂಟರ್ನೆಟ್ ಸೇವೆಗಳು ಗ್ರಾಹಕರಿಗೆ ಲಭ್ಯವಾಗಲಿದೆ. ಇದಕ್ಕೆ ಯಾವುದೇ ರೀತಿಯ ಸಮಸ್ಯೆ ಆಗುವುದಿಲ್ಲ.
ಎಟಿಎಂಗಳಲ್ಲಿ ಹಣ ಅಲಭ್ಯ ಸಾಧ್ಯತೆ
ಬ್ಯಾಂಕ್ ವ್ಯವಹಾರ ಸ್ಥಗಿತಗೊಳಿಸಿರುವುದರಿಂದ ಎಲ್ಲ ಸಾರ್ವಜನಿಕ ಬ್ಯಾಂಕ್ ಗಳ ಎಟಿಎಂಗಳಲ್ಲಿ ನಗದು ಸಿಗುವುದು ಅನುಮಾನವಿದೆ.

https://www.suddikanaja.com/2021/03/15/bank-employee-protest-in-shivamogga/

error: Content is protected !!