ಸುದ್ದಿ ಕಣಜ.ಕಾಂ | KARNATAKA | WILD LIFE
ಶಿವಮೊಗ್ಗ: ಉತ್ತರ ಪ್ರದೇಶಕ್ಕೆ ಕರ್ನಾಟಕದಿಂದ ಎರಡು ಆನೆಗಳನ್ನು ಕಳುಹಿಸುವಂತೆ ಬೇಡಿಕೆ ಸಲ್ಲಿಸಲಾಗಿದೆ. ಈ ಸಂಬಂಧ ರಾಜ್ಯ ಸರ್ಕಾರಕ್ಕೆ ಉತ್ತರ ಪ್ರದೇಶ ಸರ್ಕಾರ ಪತ್ರ ಬರೆದಿದೆ.
ಕ್ಯಾಂಪ್ ನ ಗಂಡು, ಹೆಣ್ಣಾಗೆ ಬೇಡಿಕೆ
ಉತ್ತರ ಪ್ರದೇಶದಿಂದ ಒಂದು ಗಂಡು ಹಾಗೂ ಒಂದು ಹೆಣ್ಣಾನೆಯನ್ನು ಕಳುಹಿಸಿಕೊಡುವಂತೆ ಕೋರಲಾಗಿದೆ. ಪ್ರಸಕ್ತ ಸಕ್ರೆಬೈಲಿನಲ್ಲಿ ಒಟ್ಟು 23 ಆನೆಗಳಿವೆ. ಅದರಲ್ಲಿ ಯಾವುದನ್ನು ಕಳುಹಿಸಿಕೊಡಬೇಕು ಎನ್ನುವುದು ರಾಜ್ಯ ಸರ್ಕಾರದ ಹಸಿರು ನಿಶಾನೆ ನಂತರವೇ ತೀರ್ಮಾನಿಸಲಾಗುವುದು.
ಆನೆಗಳ ಆಯ್ಕೆ ಹೇಗೆ ನಡೆಯಲಿದೆ?
ಯುಪಿಗೆ ಆನೆಗಳನ್ನು ಕಳುಹಿಸಬೇಕಾದರೆ ಅದಕ್ಕೂ ಮುನ್ನ ಆನೆಗಳ ದೈಹಿಕ ಸದೃಢತೆ, ಕಾರ್ಯಕ್ಷಮತೆ, ವಯಸ್ಸು, ತರಬೇತಿ ಗುಣಮಟ್ಟ, ಮಾನವರೊಂದಿಗೆ ಹೊಂದಿಕೊಳ್ಳುವ ಸ್ವಭಾವ ಇತ್ಯಾದಿ ಅಂಶಗಳ ಆಧಾರದ ಮೇಲೆ ಯಾವ ಆನೆಗಳನ್ನು ಕಳುಹಿಸಬೇಕು ಎನ್ನುವುದನ್ನು ನಿರ್ಣಯಿಸಲಾಗುತ್ತದೆ.
ಸಕ್ರೆಬೈಲು ಆನೆಬಿಡಾರದಿಂದ 2018ರಲ್ಲೂ ನಾಲ್ಕು ಆನೆಗಳನ್ನು ಉತ್ತರ ಪ್ರದೇಶಕ್ಕೆ ಕಳುಹಿಸಿಕೊಡಲಾಗಿತ್ತು. ಸಕ್ರೆಬೈಲಿನಲ್ಲಿ ಆನೆಗಳ ಸಂತಾನೋತ್ಪತ್ತಿ ಉತ್ತಮವಾಗಿದ್ದು, ಕಳುಹಿಸಿಕೊಡುವುದಕ್ಕೆ ಯಾವುದೇ ತೊಂದರೆಗಳಿಲ್ಲ.
https://www.suddikanaja.com/2021/02/06/elephant-returned-its-territory/