ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನ್ಯೂಮಂಡ್ಲಿ ಮೂರನೇ ಕ್ರಾಸ್ ನಲ್ಲಿ ಹಿಂದೂ ಯುವಕನ ಮೇಲೆ ಅನ್ಯಕೋಮಿನ ಆರು ಜನ ಸೇರಿ ಹಲ್ಲೆ ಮಾಡಿದ್ದು, ದೊಡ್ಡಪೇಟೆ ಪೊಲೀಸರು ನಾಲ್ವರನ್ನು ವಶಕ್ಕೆ ಪಡೆದಿದ್ದಾರೆ.
ನ್ಯೂಮಂಡ್ಲಿ ನಿವಾಸಿ ಮಧು (22) ಎಂಬಾತನ ಮೇಲೆ ಹಲ್ಲೆ ಮಾಡಲಾಗಿದೆ. ಈತ ಹೂವಿನ ಮಾರ್ಕೇಟ್ ನಲ್ಲಿ ಕೆಲಸ ಮಾಡುತ್ತಿದ್ದು, ಹೂವು ಡೆಲಿವರಿ ಕೊಟ್ಟು ಬೈಕ್ ನಲ್ಲಿ ಬರುವಾಗ ಅಡ್ಡಗಟ್ಟಿ ಅವಾಚ್ಯವಾಗಿ ಬೈಯ್ದು ಎಡ ಪಕ್ಕೆ ಹಾಗೂ ಮೈಕೈಗೆ ಹೊಡೆಯಲಾಗಿದೆ.
READ | ನಿರಂತರ ಏರಿಕೆಯಾಗುತ್ತಿದ್ದ ಪೆಟ್ರೋಲ್, ಡಿಸೇಲ್ ಬೆಲೆ ಸ್ಥಿರ
ಆರು ಜನರ ಬಳಿ ಮಾರಕಾಸ್ತ್ರಗಳಿದ್ದು, ತಕ್ಷಣ ಮಧು ಅಲ್ಲಿಂದ ತಪ್ಪಿಸಿಕೊಂಡಿದ್ದಾನೆ. ಗಾಯಗೊಂಡ ಈತನನ್ನು ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು 4 ಜನರನ್ನು ವಶಕ್ಕೆ ಪಡೆದು ತನಿಖೆ ಕೈಗೊಂಡಿದ್ದಾರೆ.