Accident | ಹರಿಗೆ ಬಳಿ ಅಪಘಾತ, ಬೈಕ್ ಸವಾರನ ಸ್ಥಿತಿ ಗಂಭೀರ

Accident

 

 

ಸುದ್ದಿ ಕಣಜ.ಕಾಂ | SHIMOGA CITY | 14 OCT 2022
ಶಿವಮೊಗ್ಗ: ಸ್ಪೀಡ್ ಬ್ರೇಕರ್ ಬಳಿ ಬೈಕ್ ವೇಗ ತಗ್ಗಿಸಿದ ಬೈಕ್ ಗೆ ಹಿಂದಿನಿಂದ ಲಾರಿಯೊಂದು ಡಿಕ್ಕಿ ಹೊಡೆದಿದ್ದು, ಬೈಕ್ ಸವಾರನ ಸ್ಥಿತಿ ಗಂಭೀರವಾಗಿದೆ.
ಬೈಕ್ ಸವಾರನನ್ನು ಭದ್ರಾವತಿಯ ಖಾಜಿ ಮೊಹಲ್ಲಾ ನಿವಾಸಿ ಸೈಯದ್ ಇರ್ಫಾನ್(47) ಎಂದು ತಿಳಿದುಬಂದಿದೆ. ಪ್ರಸ್ತುತ ಈತ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.

READ | ಶಿವಮೊಗ್ಗದಲ್ಲಿ ಯಲ್ಲೋ ಅಲರ್ಟ್, ಇನ್ನೂ 4 ದಿನ‌ ಭಾರಿ ಮಳೆ‌ ಸಾಧ್ಯತೆ

ಹಿಂಬದಿಯಿಂದ ಲಾರಿ ಡಿಕ್ಕಿ ಹೊಡೆದಿದ್ದರಿಂದ ಬೈಕ್ ಸವಾರ ಗಂಭೀರ ಗಾಯಗೊಂಡಿದ್ದು, ಸ್ಥಳೀಯರು ಆಂಬುಲೆನ್ಸ್ ಅನ್ನು ಕರೆಸಿ ಆಸ್ಪತ್ರೆಗೆ ಕರೆದೊಯ್ಯಲು ಸಹಾಯ ಮಾಡಿದ್ದಾರೆ. ಶಿವಮೊಗ್ಗ ಪೂರ್ವ ಸಂಚಾರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಎರಡು ತಿಂಗಳಲ್ಲಿ ಎರಡನೇ ಆಕ್ಸಿಡೆಂಟ್
ಕಳೆದ ತಿಂಗಳು ಸಹ ಇದೇ ಜಾಗದಲ್ಲಿ ಸಾರಿಗೆ ಸಂಸ್ಥೆಯ ಬಸ್’ವೊಂದು ಅಪಘಾತಕ್ಕೆ ಒಳಪಟ್ಟಿತ್ತು. ಚಾಲಕನ ಆಯತಪ್ಪಿ ಬಸ್ ರಸ್ತೆ ವಿಭಜಕದ ಮೇಲೆ ಹತ್ತಿತ್ತು. ಮುಂಭಾಗಗಳು ಚಕ್ರಗಳು ಕಳಚಿ ಬಿದ್ದಿದ್ದವು. ಈಗ ಲಾರಿ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ.

https://suddikanaja.com/2022/10/13/agriculture-survey-held-first-time/

Leave a Reply

Your email address will not be published. Required fields are marked *

error: Content is protected !!