ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನ್ಯಾಯಾಲಯಕ್ಕೆ ಹಾಜರಾಗದೇ ತಲೆಮರೆಸಿಕೊಂಡಿದ್ದ ವ್ಯಕ್ತಿಗೆ 6 ತಿಂಗಳು ಸಾದಾ ಕಾರಾವಾಸ ಶಿಕ್ಷೆ ಮತ್ತು 2,000 ರೂಪಾಯಿ ದಂಡ ವಿಧಿಸಿ ನ್ಯಾಯಾಲಯ ಆದೇಶಿಸಿದೆ.
READ | ಸಜಾಬಂಧಿಯ ಒಳ ಉಡುಪಿನಲ್ಲಿ ಗಾಂಜಾ! ಸಿಕ್ಕಿದ್ದು ಹೇಗೆ?
ವಿನೋಬನಗರದ ಕಾರ್ತಿಕ ಅಲಿಯಾಸ್ ಕಾಡ (29) ಶಿಕ್ಷೆಗೆ ಗುರಿಯಾದ ವ್ಯಕ್ತಿ. ಒಂದುವೇಳೆ, ದಂಡವನ್ನು ಕಟ್ಟಲು ವಿಫಲನಾದರೆ ಹೆಚ್ಚುವರಿ 6 ತಿಂಗಳು ಸಾದಾ ಕಾರವಾಸ ಶಿಕ್ಷೆ ವಿಧಿಸಿ ಮೂರನೇ ಜೆಎಂಎಫ್.ಸಿ ನ್ಯಾಯಾಲಯದ ನ್ಯಾಯಾಧೀಶರಾದ ಶ್ರುತಿ ಆದೇಶಿಸಿದ್ದಾರೆ.
ವಿನೋಬನಗರ ಠಾಣೆಯಲ್ಲಿ 4 ಕೇಸ್
ವಿನೋಬನಗರ ಠಾಣೆಯ ಒಟ್ಟು 4 ಪ್ರಕರಣಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆ ಮರೆಸಿಕೊಂಡಿದ್ದು, ಈತನ ವಿರುದ್ಧ ನ್ಯಾಯಾಲಯವು ದಸ್ತಗಿರಿ ವಾರೆಂಟ್ ಮತ್ತು ಪ್ರೋಕ್ಲಮೇಷನ್ ಹೊರಡಿಸಿದ್ದರಿಂದ, ಆತನನ್ನು 2019ರ ಫೆಬ್ರವರಿ 12ರಂದು ವಶಕ್ಕೆ ಪಡೆದು ಪ್ರಕರಣ ದಾಖಲಿಸಿ ನ್ಯಾಯಾಲಯಕ್ಕೆ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು. ಸಹಾಯಕ ಸರ್ಕಾರಿ ಅಭಿಯೋಜಕಿ ವೀಣಾ ವಾದ ಮಂಡಿಸಿದ್ದರು.
https://suddikanaja.com/2022/12/05/jobs-in-shimoga-eligible-candidate-may-apply-application/