Madhu Bangarappa | ಶಿಕ್ಷಣ ಸಚಿವ ಮಧು ಬಂಗಾರಪ್ಪ ಇಂದು ಎಲ್ಲೆಲ್ಲಿ ಭೇಟಿ ನೀಡಲಿದ್ದಾರೆ?

Madhu Bangarappa

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ (Madhu Bangarappa) ಅವರು ಜು.21ರಂದು ಜಿಲ್ಲೆಯ ವಿವಿಧ ತಾಲೂಕುಗಳಲ್ಲಿ ಪ್ರವಾಸ ಮಾಡಲಿದ್ದಾರೆ ಎಂದು ಸಚಿವರ ಆಪ್ತ ಕಾರ್ಯದರ್ಶಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

READ | ಬೈಕ್, ಕಾರಿಗೆ ಬಿದ್ದ ಟ್ರಾಫಿಕ್ ದಂಡ‌ ಕೇಳಿದ್ರೆ ಶಾಕ್ ಆಗ್ತಿರಾ!

ಎಲ್ಲೆಲ್ಲಿ ಏನು ಕಾರ್ಯಕ್ರಮ?
* ಜು.21 ರಂದು ಬೆಳಗ್ಗೆ 9 ಗಂಟೆಗೆ ತಾಳಗುಪ್ಪ (Talaguppa) ಹೋಬಳಿ, ಹಿರೇನೆಲ್ಲೂರು ಗ್ರಾಮದ ಮುಳುಗಡೆ ಪ್ರದೇಶಕ್ಕೆ ಭೇಟಿ.
* ಬೆಳಗ್ಗೆ 9.50 ಗಂಟೆಗೆ ಸೈದೂರು ಕನ್ನಹೊಳೆ ಮುಳುಗಡೆ ಪ್ರದೇಶದ ವೀಕ್ಷಣೆ
* ಬೆಳಗ್ಗೆ 10.30 ಗಂಟೆಗೆ ಮಂಡಗಳಲೆ (Mandagalale) ಕಾಳಜಿ ಕೇಂದ್ರಕ್ಕೆ ಭೇಟಿ
* ಬೆಳಗ್ಗೆ 11.15 ಗಂಟೆಗೆ ಸಾಗರ ನಗರದಲ್ಲಿ ಮಳೆಯಿಂದ ಹಾನಿಯಾದ ಮನೆ ವೀಕ್ಷಣೆ
* ಮಧ್ಯಾಹ್ನ 12.20 ಗಂಟೆಗೆ ಮಾರುತಿಪುರ ಗ್ರಾಮದಲ್ಲಿ ಎನ್.ಎಚ್-766ಸಿ ರಸ್ತೆ ಹಾನಿ ವೀಕ್ಷಣೆ
* ಮಧ್ಯಾಹ್ನ 1.20 ಗಂಟೆಗೆ ತೀರ್ಥಹಳ್ಳಿ (Thirthahalli) ಪ್ರವಾಸಿ ಮಂದಿರದಲ್ಲಿ ಅಧಿಕಾರಿಗಳೊಂದಿಗೆ ಚರ್ಚೆ
* ಮಧ್ಯಾಹ್ನ 3.30 ಗಂಟೆಗೆ ತೀರ್ಥಹಳ್ಳಿ ತಾಲೂಕಿನ ಮೇಲಿನಕುರುವಳ್ಳಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರಾಷ್ಟ್ರೀಯ ಹೆದ್ದಾರಿಯ ಗುಡ್ಡ ಕುಸಿದು ತಡೆಗೋಡೆ ಹಾನಿಯಾದ ಪ್ರವೇಶ ವೀಕ್ಷಣೆ
* ಸಂಜೆ 5 ಗಂಟೆಗೆ ತೀರ್ಥಹಳ್ಳಿಯಿಂದ ರಸ್ತೆ ಮುಖಾಂತರ ಬೆಂಗಳೂರಿಗೆ ವಾಪಸ್

error: Content is protected !!