Rain damage | ಕೊಡಚಾದ್ರಿ ಸಮೀಪ ಧರೆ ಕುಸಿತ, ಕಿರುಸೇತುವೆ ಕುಸಿತದಿಂದ ಸಂಪರ್ಕ ಕಳೆದುಕೊಳ್ಳುವ ಭೀತಿಯಲ್ಲಿ ಜನ, ಮನೆ ಕುಸಿದರೂ ಅಧಿಕಾರಿಗಳು ಡೋಂಟ್ ಕೇರ್!

shivamogga rain 1

 

 

ಸುದ್ದಿ ಕಣಜ.ಕಾಂ ಹೊಸನಗರ
HOSANAGARA: ಕೊಡಚಾದ್ರಿ (Kodachadri) ಸಮೀಪದ ಕಟ್ಟಿನಹೊಳೆ- ಗೌರಿಕೆರೆ ನಡುವೆ ಬುಧವಾರ ಧರೆ ಕುಸಿತ(land sliding)ವಾಗಿದೆ. ಮಳೆ ಹೀಗೆಯೇ ಮುಂದುವರಿದರೆ ಇನ್ನಷ್ಟು ಧರೆ ಕುಸಿತಗೊಂಡು ಸಂಪರ್ಕ ಕಡಿತಗೊಳ್ಳುವ ಆತಂಕ ಇದೆ.
ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ನಾಗೋಡಿ (nagodi) ಗ್ರಾಮದ ಹಾಲ್ಮನೆ ಗ್ರಾಮೀಣ ಸಂಪರ್ಕ ರಸ್ತೆ ಹಾಗೂ ಗುರುಟೆ ಸಂಪದಮನೆ ಸಂಪರ್ಕ ರಸ್ತೆಗೆ ಮಳೆಯಿಂದ ಹಾನಿಯಾಗಿದೆ.

READ | ಮಲೆನಾಡಿನಲ್ಲಿ ಭೂಕುಸಿತ 1,352 ಗ್ರಾಮಗಳನ್ನು ಗುರುತಿಸಿದ ಸರ್ಕಾರ, ಮೀಸಲಿಟ್ಟ ಅನುದಾನವೆಷ್ಟು?

* ಹೊಸನಗರ ತಾಲೂಕಿನ ರಾಮಚಂದ್ರಾಪುರ ಗ್ರಾಪಂ ವ್ಯಾಪ್ತಿಯ ನೆಲ್ಲುಂಡೆ ಗ್ರಾಮದಲ್ಲಿ ಕಿರುಸೇತುವೆ ಭಾಗಶಃ ಕುಸಿದಿದೆ. ಎಸ್.ಸಿ, ಎಸ್.ಟಿ ಕಾಲೊನಿ ಇದೇ ಭಾಗದಲ್ಲಿದೆ. ಹಾಗೂ ವಿದ್ಯಾರ್ಥಿಗಳು, ಕೃಷಿಕರು‌ ನಿತ್ಯ ಕಿರಸೇತುವೆಯ ಮೇಲೆಯೇ ಅವಲಂಬಿತರಾಗಿದ್ದಾರೆ. ಹಲವು ವರ್ಷಗಳ ಹಿಂದೆಯೇ ಕಿರುಸೇತುವೆ ಹಾನಿಯಾಗಿತ್ತು. ಮಳೆಯ ರಭಸಕ್ಕೆ ಸೇತುವೆಯ ಇಕ್ಕೆಲಗಳ ಪಿಚ್ಚಿಂಗ್ ಕುಸಿದಿದೆ. ಸೇತುವೆಯೂ ಕುಸಿಯುವ ಹಂತದಲ್ಲಿದೆ.‌ ಕೂಡಲೇ ಅಧಿಕಾರಿಗಳು ಇದರೆಡೆಗೆ ಗಮನಹರಿಸಬೇಕೆಂದು ಸ್ಥಳೀಯರು ಆಗ್ರಹಿಸಿದ್ದಾರೆ.
* ಹೊಸನಗರ ತಾಲೂಕಿನ ಬಾಳೂರು ಪಂಚಾಯಿತಿ ವ್ಯಾಪ್ತಿಯ ಕೆಂದಾಳದಿಂಬದಲ್ಲಿ ಮನೆ ಕುಸಿದಿದೆ. ಅಮರ್ ಸಿಂಗ್ ಕುಟುಂಬ ಜೀವಾಪಾಯದಿಂದ ಪಾರಾಗಿದೆ. ವಾಸದ ಮನೆ ನಷ್ಟಗೊಂಡು ಅಪಾರ ನಷ್ಟವಾಗಿದೆ.
* ಜೋಗ ಸಮೀಪದ ಬಾರಂಗಿ ಹೋಬಳಿ ಬಾನಕುಳಿ ಗ್ರಾಪಂ ವ್ಯಾಪ್ತಿಯ ದೇವಗಾರುವಿನಲ್ಲಿ ಅನಂತ ವೆಂಕಟ ಮರಾಠಿ ಎಂಬುವವರ ಮನೆ ಮಳೆಗೆ ಧರಾಶಾಹಿಯಾಗಿದೆ. ಮನೆ ಬಿದ್ದು ಎರಡು ದಿನಗಳಾದರೂ ಪಂಚಾಯಿತಿ ಅಧಿಕಾರಿಗಳು ಭೇಟಿ ನೀಡಿಲ್ಲ ಎಂದು ಸಂತ್ರಸ್ತರು ಆಕ್ರೋಶ ವ್ಯಕ್ತಪಡಿಸಿದ್ದಾರೆ.

Market news Logo

error: Content is protected !!