ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ರಾಗಿಗುಡ್ಡದಲ್ಲಿ ಈದ್ ಮಿಲಾದ್ ಮೆರವಣಿಗೆ ಸಂದರ್ಭದಲ್ಲಿ ನಡೆದ ಕಲ್ಲು ತೂರಾಟದ ಬೆನ್ನಲ್ಲೇ ಪೊಲೀಸ್ ಬಿಗಿ ಬಂದೋಬಸ್ತ್ ಮಾಡಲಾಗಿದೆ. ಶಾಂತಿ ನಗರ ಮತ್ತು ಭಾನುವಾರ ಸಂಜೆ ಕಲ್ಲು ತೂರಾಟವಾದ ಪ್ರದೇಶಗಳಲ್ಲದೇ ವೃತ್ತಗಳಲ್ಲೂ ಪೊಲೀಸರ ಸರ್ಪಗಾವಲಿದೆ.
VIDEO REPORT
ಯಾರೂ ಬರುವಂತಿಲ್ಲ, ಹೋಗುವಂತಿಲ್ಲ
ರಾಗಿಗುಡ್ಡ ಪ್ರದೇಶದಲ್ಲಿ ಒಳಗಡೆಯವರು ಹೊರಗೆ ಹೋಗುವಂತಿಲ್ಲ, ಹೊರಗಿನವರು ಒಳಗೆ ಪ್ರವೇಶಿಸುವಂತಿಲ್ಲ. ಇಡೀ ಪ್ರದೇಶವೇ ದಿಗ್ಬಂಧನದಲ್ಲಿದೆ. ಅನುಮಾನಾಸ್ಪದವಾಗಿ ಯಾರೇ ಓಡಾಡಿದರೂ ಅವರನ್ನು ಪರಿಶೀಲಿಸಲಾಗುತ್ತಿದೆ. ಕೆಎಸ್.ಆರ್ಪಿ, ಆರ್.ಎ.ಎಫ್’ಗಳು ಗಸ್ತಿನಲ್ಲಿದ್ದು, ರಾತ್ರಿಯಿಂದಲೇ ಇಡೀ ಪ್ರದೇಶವೇ ಪೊಲೀಸರ ಕಂಟ್ರೋಲ್’ನಲ್ಲಿದೆ.
Follow us for more updates CLICK HERE
ಅಂಗಡಿಗಳು ಕ್ಲೋಸ್, ರಸ್ತೆಯೆಲ್ಲ ಮೌನ
ಆ ಭಾಗದ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಿಸಿದ್ದು, ಮೂಲಸೌಕರ್ಯಗಳು ಲಭ್ಯವಿಲ್ಲದ ಸ್ಥಿತಿ ಅಲ್ಲಿದೆ. ಯಾವುದೇ ಅಹಿತಕರ ಘಟನೆಗಳು ಪುನರಾವರ್ತನೆ ಆಗದಂದೆ ಎಚ್ಚರವಹಿಸಲಾಗಿದೆ.
ಮನೆ ಆವರಣದಲ್ಲಿ ದೊಡ್ಡ ಗಾತ್ರದ ಕಲ್ಲು
ನಿನ್ನೆ ಸಂಜೆ ರಾಗಿಗುಡ್ಡದ ಹಲವು ಭಾಗಗಳಲ್ಲಿ ನಿರಂತರ ಕಲ್ಲು ತೂರಾಟ ಮಾಡಲಾಗಿದೆ. ಮನೆಯ ಕಿಟಕಿ, ಗಾಜುಗಳು ಪುಡಿಪುಡಿಯಾಗಿವೆ. ಕಿಟಕಿಗಳನ್ನು ಮುರಿಯಲಾಗಿದೆ. ನೂರಾರು ಜನ ಸೇರಿ ಕಲ್ಲು ತೂರಾಟ ಮಾಡಿರುವುದಾಗಿ ಸ್ಥಳೀಯರು ತಿಳಿಸಿದ್ದಾರೆ. ಎಷ್ಟೇ ಕಿರುಚಾಡಿದರೂ ತಲೆಕೆಡಿಸಿಕೊಳ್ಳದೇ ಮನೆಗಳ ಮೇಲೆ ಕಲ್ಲುಗಳನ್ನು ಹೊಡೆಯಲಾಗಿದೆ.
READ | ರಾಗಿಗುಡ್ಡದಲ್ಲಿ ಕಲ್ಲು ತೂರಾಟ ಕೇಸ್ ಬಗ್ಗೆ ಎಸ್.ಪಿ ಮಿಥುನ್ ಕುಮಾರ್ ಹೇಳಿದ್ದೇನು?
ದ್ವಿಚಕ್ರ ವಾಹನ, ಕಾರಿನ ಮೇಲೆ ಕಲ್ಲು ತೂರಾಟ ಮಾಡಿದ್ದು, ಗಾಜುಗಳು ಒಡೆದಿವೆ. ಭಯದಿಂದಾಗಿ ಜನರು ಹೊರಗಡೆ ಬರುವುದಕ್ಕೂ ಹಿಂದೇಟು ಹಾಕುತ್ತಿದ್ದಾರೆ. ಒಟ್ಟಾರೆ, ರಾಗಿಗುಡ್ಡ ಭಾಗದಲ್ಲಿ ಭಯದ ಸ್ಥಿತಿ ಇದೆ. ನೂರಾರು ಮನೆಗಳ ಕಲ್ಲು ತೂರಾಟ ಮಾಡಿದ್ದು, ಎಂಟಕ್ಕೂ ಹೆಚ್ಚು ಜನರು ಗಾಯಗೊಂಡಿದ್ದು, ಮೆಗ್ಗಾನ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.