ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ರಾಗಿಗುಡ್ಡದಲ್ಲಿ (Ragigudda stone pelting case) ಭಾನುವಾರ ಸಂಭವಿಸಿದ ಕಲ್ಲು ತೂರಾಟ ಪ್ರಕರಣ ಸಂಬಂಧ ಎಸ್.ಪಿ ಮಿಥುನ್ ಕುಮಾರ್ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದಾರೆ.
READ | ರಾಗಿಗುಡ್ಡದಲ್ಲಿ ಪೊಲೀಸ್ ಸರ್ಪಗಾವಲು, ಇದುವರೆಗೆ ಏನೇನಾಯ್ತು?
ಈದ್ ಮಿಲಾದ್ ಮೆರವಣಿಗೆ (Eid milad procession) ವೇಳೆಯಲ್ಲಿ ಕೆಲವು ದುಷ್ಕರ್ಮಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಈ ಕುರಿತು ಮಾಹಿತಿ ಲಭ್ಯವಾದ ತಕ್ಷಣ ಘಟನಾ ಸ್ಥಳಕ್ಕೆ ತೆರಳಿದ್ದೇವೆ. ಮನವೊಲೈಸುವ ಯತ್ನ ಕೂಡ ಮಾಡಲಾಗಿದೆ. ಅದನ್ನು ಕೆಲವರು ಒಪ್ಪಿದ್ದರೆ ಕೆಲವರು ಒಪ್ಪಿಲ್ಲ. ಗುಂಪೊಂದು ದಾಂಧಲೆಗೆ ಸಿದ್ಧತೆ ಮಾಡಿಮೊಂಡಿತ್ತು. ಈ ಕಾರಣದಿಂದಾಗಿ ಪರಿಸ್ಥಿತಿಯನ್ನು ಹತೋಟಿಗೆ ತರಲು ಹೆಚ್ಚುವರಿ ಬಲ ಪ್ರಯೋಗ ಮಾಡಬೇಕಾಯಿತು ಎಂದು ತಿಳಿಸಿದರು.
ಗಲಾಟೆ ನಡೆಯುತ್ತಿದ್ದ ಜಾಗದಲ್ಲಿತಕ್ಷಣ ಕಲಂ 144 ಜಾರಿಗೆ ತರಲಾಯಿತು. ಕಲ್ಲು ತೂರಾಟದಲ್ಲಿ ಕೆಲವರಿಗೆ ಗಾಯಗಳಾಗಿವೆ. ಆಸ್ತಿಪಾಸ್ತಿ ಹಾನಿ ಉಂಟಾಗಿದೆ. ಇದರ ಬಗ್ಗೆ ದೂರು ನೀಡುವಂತೆ ಜನರಿಗೆ ತಿಳಿಸಲಾಗಿದೆ.
ಎಲ್ಲವೂ ಹತೋಟಿಯಲ್ಲಿದೆ ವದಂತಿ ನಂಬಬೇಡಿ
ಕಲ್ಲು ತೂರಾಟ ನಡೆದ ಜಾಗದಲ್ಲಿ ಭದ್ರತೆ ಕಲ್ಪಿಸಲಾಗಿದೆ. ಯಾರೂ ಭಯ ಪಡಬೇಕಿಲ್ಲ. ಪರಿಸ್ಥಿತಿ ಹತೋಟಿಯಲ್ಲಿದೆ. ಏನೂ ಸಮಸ್ಯೆ ಇಲ್ಲ. ಯಾರೂ ವದಂತಿಗಳಿಗೆ ಕಿವಿಗೊಡಬೇಡಿ ಎಂದು ಮನವಿ ಮಾಡಿದರು.
ಮಾಹಿತಿ ನಂತರ ನೀಡಲಾಗುವುದು
ಘಟನೆ ಸಂಬಂಧ ಕೆಲವರನ್ನು ವಶಕ್ಕೆ ಪಡೆಯಲಾಗಿದೆ. ಎಷ್ಟು ಜನ ಗಾಯಗೊಂಡಿದ್ದಾರೆ. ಎಷ್ಟು ದೂರು ದಾಖಲಾಗಿವೆ? ಈ ಎಲ್ಲ ಪ್ರಶ್ನೆಗಳಿಗೆ ಮಾಹಿತಿ ನೀಡಲಾಗುವುದು ಎಂದರು.