Shivamogga Police | ಮೂವರ ಪ್ರಾಣ ರಕ್ಷಿಸಿದ ಪೊಲೀಸರು, ಭೇಷ್ ಎಂದ ಎಸ್ಪಿ

Police best

 

 

ಸುದ್ದಿ‌ ಕಣಜ.ಕಾಂ ಸಾಗರ
SAGAR: ಸಾಗರ ತಾಲೂಕಿನ ಕುಗ್ವೆ (Kugve) ಗ್ರಾಮದ ಹೊಳೆಯ ಹತ್ತಿರ ಇಬ್ಬರು ಮಕ್ಕಳೊಂದಿಗೆ ಮಹಿಳೆಯೊಬ್ಬರು ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದಾರೆಂದು ತಿಳಿದ ಪೊಲೀಸರು ಅವರನ್ನು ರಕ್ಷಿಸಿದ್ದಾರೆ.
ಆತ್ಮಹತ್ಯೆಗೆ ಯತ್ನಿಸುತ್ತಿರುವ ಬಗ್ಗೆ 112 ERSS ಸಹಾಯವಾಣಿಗೆ ಸಾರ್ವಜನಿಕರಿಂದ ಕರೆ ಬಂದ ಮೇರೆಗೆ, ERSS ವಾಹನದ ಅಧಿಕಾರಿಗಳಾದ ಸಾಗರ ಪೇಟೆ ಪೊಲೀಸ್ ಠಾಣೆಯ ಎ.ಆರ್.ಶಿವರುದ್ರಯ್ಯ ಮತ್ತು ಚಾಲಕ ಶಿವಾನಂದ್ ಕೂಡಲೇ ಕಾರ್ಯಪ್ರವೃತ್ತರಾಗಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿ ಆತ್ಮಹತ್ಯೆಗೆ ಪ್ರಯತ್ನಿಸುತ್ತಿದ್ದವರನ್ನು ತಡೆದು ಮಹಿಳೆ ಹಾಗೂ 2 ಮಕ್ಕಳು ಸೇರಿದಂತೆ ಮೂವರನ್ನು ರಕ್ಷಿಸಿ, ಉತ್ತಮ ಕಾರ್ಯ ನಿರ್ವಹಿಸಿರುತ್ತಾರೆ.
ERSS ವಾಹನದ ಅಧಿಕಾರಿಗಳ ಉತ್ತಮ ಕಾರ್ಯವನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ಕೆ.ಮಿಥುನ್ ಕುಮಾರ್ ಪ್ರಶಂಸಿಸಿದ್ದಾರೆ.

READ | ಶಿವಮೊಗ್ಗ ಸೇರಿ ರಾಜ್ಯದ 8 ರೈಲುಗಳ ಸಂಚಾರ ಎರಡು ದಿನ ರದ್ದು, ಇಲ್ಲಿದೆ ರೈಲುಗಳ ಪಟ್ಟಿ

error: Content is protected !!