ಸುದ್ದಿ ಕಣಜ.ಕಾಂ | CITY | FIRE ACCIDENT
ಶಿವಮೊಗ್ಗ: ವಿದ್ಯಾನಗರದ ಭಾರತೀಯ ಸ್ಟೇಟ್ ಬ್ಯಾಂಕ್ (ಎಸ್ಬಿಐ) ಶಾಖೆಯಲ್ಲಿ ಭಾನುವಾರ ಮಧ್ಯಾಹ್ನ ಸಂಭವಿಸಿದ ಶಾರ್ಟ್ ಸರ್ಕ್ಯೂಟ್ ನಿಂದಾಗಿ ಲಕ್ಷಾಂತರ ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ.
ಬ್ಯಾಂಕಿನ ಕ್ಯಾಶ್ ಕೌಂಟರ್ ಬಳಿ ಶಾರ್ಟ್ ಸರ್ಕ್ಯೂಟ್ ಆಗಿದ್ದು ಏಕಾಏಕಿ ಬೆಂಕಿ ತಾಕಿಕೊಂಡಿದೆ. ಭಾನುವಾರ ರಜೆ ಇದುದ್ದರಿಂದ ಗಮನಕ್ಕೆ ಬಂದಿಲ್ಲ. ಬ್ಯಾಂಕ್ ಒಳಗೆ ದಟ್ಟ ಹೊಗೆ ತುಂಬಿ ಹೊರಬರಲಾರಂಭಿಸಿದೆ. ಆಗ ಜನರ ಗಾಬರಿಂದ ಅಗ್ನಿಶಾಮಕ ಠಾಣೆಗೆ ಮಾಹಿತಿ ನೀಡಿದ್ದಾರೆ. ಅಗ್ನಿಶಾಮಕ ಸಿಬ್ಬಂದಿ ಬರುವ ಹೊತ್ತಿಗೆ ಬ್ಯಾಂಕಿನ ಬಹುಪಾಲು ಸಾಮಗ್ರಿಗಳು ಸುಟ್ಟಿದ್ದವು. ನಂತರ, ಬೆಂಕಿಯನ್ನು ನಂದಿಸಿ ಒಳಗೆ ಪ್ರವೇಶಿಸಲಾಗಿದೆ. ದಟ್ಟವಾಗಿ ತುಂಬಿಕೊಂಡಿದ್ದ ಹೊಗೆಯನ್ನು ಹೊರಗೆ ತೆಗೆಯಲಾಗಿದೆ.
ಆರು ಕಂಪ್ಯೂಟರ್, 1 ಎಸಿ, ಸಿಸಿ ಟಿವಿ, 6 ಪ್ರಿಂಟರ್, ಹಣ ಎಣಿಸುವ ಯಂತ್ರ, ಸ್ಕ್ಯಾನರ್, 6 ಫ್ಯಾನ್, ಪೀಠೋಪಕರಣ, ಟಿವಿ, ಸ್ಮೋಕ್ ಡಿಟೆಕ್ಟರ್, 6 ಸ್ಪೀಕರ್ ಸೇರಿದಂತೆ ಎಲ್ಲವೂ ಸುಟ್ಟಿದ್ದು, ಅಂದಾಜು 3 ಲಕ್ಷ ರೂಪಾಯಿವರೆಗೆ ನಷ್ಟ ಸಂಭವಿಸಿದೆ.
ಅಗ್ನಿಶಾಮಕ ಸಿಬ್ಬಂದಿ ಬೆಂಕಿ ನಂದಿಸಿದ್ದೇ ಬ್ಯಾಂಕ್ ವ್ಯವಸ್ಥಾಪಕರು, ಡಿವೈಎಸ್ಪಿ ಮತ್ತು ಅಗ್ನಿಶಾಮಕ ಅಧಿಕಾರಿಗಳು ಲಾಕರ್ ರೂಂ ತೆಗೆದು ಪರಿಶೀಲಿಸಿದ್ದಾರೆ. ನೋಟುಗಳಿಗೆ ಯಾವುದೇ ರೀತಿಯ ಹಾನಿಯಾಗಿಲ್ಲ. ಕೋಟೆ ಠಾಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಡಿ.ಎಫ್.ಒ. ಅಶೋಕ್ ಕುಮಾರ್, ಠಾಣಾಧಿಕಾರಿ ಕೆ.ಎನ್.ಪ್ರವೀಣ್ ಸೇರಿದಂತೆ ಇತರರು ಬೆಂಕಿ ನಂದಿಸಿದರು.
https://www.suddikanaja.com/2021/09/18/smart-city-cables-burnt/