ನಾಳೆ ಪೊಲೀಸರೊಂದಿಗೆ ನಡೆಯಲಿದೆ ಮಹತ್ವದ ಚರ್ಚೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ನಗರದಲ್ಲಿ ಹೆಚ್ಚುತ್ತಿರುವ ಟ್ರಾಫಿಕ್ ಸಮಸ್ಯೆಗೆ ತಾರ್ಕಿಕ ಅಂತ್ಯ ಹಾಡುವ ಉದ್ದೇಶದಿಂದ ಮಹಾನಗರ ಪಾಲಿಕೆ ಮತ್ತು ಪೊಲೀಸ್ ಇಲಾಖೆ ನಡುವೆ ನವೆಂಬರ್ 19ರಂದು ಮಹತ್ವದ ಚರ್ಚೆ ನಡೆಯಲಿದೆ. ಇದರಲ್ಲಿ ನಗರದಲ್ಲಿರುವ ಯಾವ ರಸ್ತೆಗಳನ್ನು ಒನ್ ವೇ ಆಗಿ ಘೋಷಿಸಬೇಕು, ರಸ್ತೆಯ ಎಡ ಮತ್ತು ಬಲ ಭಾಗದಲ್ಲಿ ಪಾರ್ಕಿಂಗ್ ಸೌಲಭ್ಯ ನೀಡುವುದು. ಹೀಗೆ ಪ್ರಮುಖ ಸಂಗತಿಗಳ ಬಗ್ಗೆ ಚರ್ಚೆ ನಡೆಯಲಿದೆ.
ನಗರದ ನಂಜಪ್ಪ ಆಸ್ಪತ್ರೆ, ಸರ್ಜಿ ಆಸ್ಪತ್ರೆ , ಮ್ಯಾಕ್ಸ್ ಆಸ್ಪತ್ರೆ, ಮಲ್ನಾಡ್ ಡಯಾಗ್ನೋಸಿಸ್, ವಾತ್ಸಲ್ಯ ಆಸ್ಪತ್ರೆ, ರತ್ನಮ್ಮ ಮಾಧವ ರಾವ್ ರಸ್ತೆ ಮತ್ತು ನಂಜಪ್ಪ ಆಸ್ಪತ್ರೆ ಡೌನ್ ರಸ್ತೆ, ತಿಲಕ್ ನಗರ ವಿವಿಧೆಡೆ ಬುಧವಾರ ಭೇಟಿ ನೀಡಿದ ಮೇಯರ್ ನೇತೃತ್ವದ ತಂಡ ಪಾರ್ಕಿಂಗ್ ಸಮಸ್ಯೆಯನ್ನು ಪರಿಶೀಲಿಸಿತು. ಈ ವೇಳೆ, ಮೇಯರ್ ಸುವರ್ಣ ಶಂಕರ್ ಚರ್ಚೆ ಮಾಡುವುದಾಗಿ ತಿಳಿಸಿದರು.
ಪಾಲಿಕೆ ಉಪ ಮೇಯರ್ ಸುರೇಖಾ ಮುರುಳೀಧರ್, ಎಸ್.ಎನ್. ಚನ್ನಬಸಪ್ಪ, ಆಯುಕ್ತ ಚಿದಾನಂದ್ ಎಸ್.ವಟಾರೆ, ಡಿವೈಎಸ್.ಪಿ ಉಮೇಶ್ ನಾಯ್ಕ ಸೇರಿ ಇತರರು ಉಪಸ್ಥಿತರಿದ್ದರು.

Leave a Reply

Your email address will not be published. Required fields are marked *

error: Content is protected !!