ಸುದ್ದಿ ಕಣಜ.ಕಾಂ
ಚಿತ್ರದುರ್ಗ: ಇಲ್ಲಿನ ಸರಸ್ವತಿ ಕಾನೂನು ಕಾಲೇಜಿನ ಪ್ರಾಂಶುಪಾಲರಾದ ಎಂ.ಎಸ್.ಸುಧಾದೇವಿ ಅವರಿಗೆ ಕುವೆಂಪು ವಿಶ್ವವಿದ್ಯಾಲಯ ಪಿ.ಎಚ್.ಡಿ ಪದವಿ ನೀಡಿ ಗೌರವಿಸಿದೆ. ಡಾ.ಬಿ.ಎಸ್.ರೆಡ್ಡಿ ಮಾರ್ಗದರ್ಶನದಲ್ಲಿ ಸಂಶೋಧನೆ ನಡೆಸಿ `ಲೀಗಲ್ ರಿಫಾರ್ಮೇಶನ್ ಆಫ್ ದ ಸ್ಟೇಟಸ್ ಆಫ್ ವುಮೆನ್ ಇನ್ ಮಾಡರ್ನ್ ಕಾಂಟೆಕ್ಸ್ಟ್ ವಿತ್ ಸ್ಟೆಷಲ್ ರೆಫರೆನ್ಸ್ ಟು ಇಂಡಿಯನ್ ಲೆಜಿಸ್ಲೇಷನ್’ ವಿಷಯದಲ್ಲಿ ಮಂಡಿಸಿದ ಮಹಾಪ್ರಬಂಧಕ್ಕೆ ಕಾನೂನು ವಿಷಯದಲ್ಲಿ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.