ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಮಾಡರ್ನ್ ಟಾಕೀಸ್ ಬಳಿ ಬುಧವಾರ ತಡ ರಾತ್ರಿ ಬೆಂಕಿ ಅನಾಹುತ ಸಂಭವಿಸಿದ್ದು, ಭಾರಿ ಅನಾಹುತವೊಂದು ಸ್ವಲ್ಪದ್ದರಲ್ಲೇ ತಪ್ಪಿದಂತಾಗಿದೆ.
VIDEO REPORT
ಸುಲ್ತಾನ್ ಮಾರ್ಕೆಟ್ ಮುಂದೆ ಗುಜರಿ ಸಾಮಗ್ರಿಗಳನ್ನು ಇಡಲಾಗಿದ್ದು, ರಾತ್ರಿ ಟಯರ್ ಗೆ ಬೆಂಕಿ ಹೊತ್ತಿಕೊಂಡಿದೆ. ಹೀಗಾಗಿ, ಅಕ್ಕಪಕ್ಕದ ಜನ ಗಾಬರಿಗೊಂಡಿದ್ದರು.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಿಡಿಗೇಡಿಯೊಬ್ಬರು ಗುಜರಿಗೆ ಬೆಂಕಿ ಇಟ್ಟಿರುವುದಾಗಿ ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಘಟನೆಯ ಬಗ್ಗೆ ಪೊಲೀಸರು ತನಿಖೆ ನಡೆಸಿದ್ದಾರೆ.