ಸುದ್ದಿ ಕಣಜ.ಕಾಂ | TALUK | PROTEST
ತೀರ್ಥಹಳ್ಳಿ: ತಾಲೂಕಿನ ನಾಲೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಗ್ರಾಮ ಪಂಚಾಯಿತಿಗೆ ಮರಳು ರಾಜಧನ ನೀಡದ ಕಾರಣ ಕ್ವಾರಿ ಗೇಟಿಗೆ ಗ್ರಾಮ ಪಂಚಾಯಿತಿ ಸದಸ್ಯರು ಬೀಗ ಹಾಕಿ ಪ್ರತಿಭಟನೆ ಮಾಡಿದ್ದಾರೆ.
READ | 3 ವರ್ಷದ ಹೆಣ್ಣು ಮಗುವಿನೊಂದಿಗೆ ಬಾವಿಗೆ ಜಿಗಿದು ಮಹಿಳೆ ಆತ್ಮಹತ್ಯೆ
ತಾಲ್ಲೂಕಿನಲ್ಲಿ ಅತಿ ಹೆಚ್ಚು ಮರಳು ಕ್ವಾರಿಗಳನ್ನು ಹೊಂದಿರುವ ನಾಲೂರು ಪಂಚಾಯಿತಿಗೆ ಕಳೆದ 3 ವರ್ಷಗಳಿಂದ ಸರ್ಕಾರದಿಂದ ಬರಬೇಕಾದ ಸುಮಾರು 2.40 ಕೋಟಿ ರೂಪಾಯಿಗೂ ಅಧಿಕ ರಾಜಧನ ಕಟ್ಟಿಲ್ಲ. 2018-19 ಅವಧಿಯಲ್ಲಿ 80 ಲಕ್ಷ ರೂಪಾಯಿಗೂ ಅಧಿಕ ಹಣ ಬಾಕಿ ಇದೆ. 2019-20 ಸಾಲಿನ 18 ಲಕ್ಷ ರೂಪಾಯಿ ಹಣವನ್ನು ಬಿಡುಗಡೆ ಮಾಡುವ ಭರವಸಯನ್ನೇನೋ ಇಲಾಖೆ ಭರವಸೆ ನೀಡಿ ಪತ್ರ ಬರೆದಿದೆ. ಆದರೆ 2018-19ನೇ ಸಾಲಿನ ಹಣ ಜಮೆ ಆಗಿಲ್ಲ. ಹೀಗಾಗಿ ಸದಸ್ಯರು ಬೀಗ ಜಡಿದು ಪ್ರತಿಭಟನೆ ಮಾಡುತ್ತಿದ್ದಾರೆ. ಈಗಾಗಲೇ ಅರೇಹಳ್ಳಿ ಗ್ರಾಮ ಪಂಚಾಯಿತಿ ಕೂಡ ಕ್ವಾರಿಗೆ ಬೀಗ ಹಾಕಿದೆ.
ರಸ್ತೆ ಹಾಳಾಗಿವೆ, ರಾಜಧನ ಸಂದಾಯವಾಗಿಲ್ಲ
ನ್ಯಾಯಯುತವಾಗಿ ಪಂಚಾಯಿತಿಗಳಿಗೆ ಸಂದಾಯವಾಗಬೇಕಿದ್ದ ರಾಜಧನ ಇದುವರೆಗೆ ನೀಡಿಲ್ಲ. ಒಂದೆಡೆ ವಾಹನಗಳು ಓಡಾಡಿ ರಸ್ತೆಗಳು ಹಾಳಾಗಿವೆ. ಇದರಿಂದಾಗಿ, ಪಂಚಾಯಿತಿ ವ್ಯಾಪ್ತಿಯಲ್ಲಿ ಅಭಿವೃದ್ಧಿ ಮಾಡಲು ಸಾಧ್ಯವಾಗುತ್ತಿಲ್ಲ ಎಂದು ಪಂಚಾಯಿತಿ ಸದಸ್ಯರು ಆರೋಪಿಸಿದ್ದಾರೆ.
ನಾಲೂರು ಗ್ರಾಪಂ ಅಧ್ಯಕ್ಷೆ ಶಾರದಮ್ಮ ಅವರ ನೇತೃತ್ವದಲ್ಲಿ ಆಡಳಿತ ಸದಸ್ಯರಾದ ಸಂದೀಪ್ ಗಾರ್ಡರಗದ್ದೆ, ಶಾರದಾ, ಸುಧಾ, ಅನಿತಾ, ದ್ವಿಜರಾಜ, ಮೋಹನ್ ಇತರರು ಪ್ರತಿಭಟನೆಗೆ ಮುಂದಾಗಿದ್ದಾರೆ.
https://www.suddikanaja.com/2021/03/23/criminal-case-for-violating-the-sand-guidelines/