ಸುದ್ದಿ ಕಣಜ.ಕಾಂ | TALUK | CRIME NEWS
ಭದ್ರಾವತಿ: ತಾಲೂಕಿನ ಹೊಳೆಹೊನ್ನೂರು ಸಮೀಪದ ನಿಂಬೆಗುಂದಿ ಗ್ರಾಮದಲ್ಲಿ ಚಾರ್ಜ್ ಗೆ ಹಾಕಿದ್ದ ಎಲೆಕ್ಟ್ರಿಕ್ ಬೈಕ್ ವೊಂದು ಸ್ಫೋಟಗೊಂಡ ಘಟನೆ ನಡೆದಿದೆ. ಅದೃಷ್ಟವಷಾತ್ ಜೀವಹಾನಿಯಾಗಿಲ್ಲ.
READ | ಜಾವಳ್ಳಿ ಬಳಿ ಟ್ಯಾಂಕರ್ ಪಲ್ಟಿ, ಪೆಟ್ರೋಲ್ ತುಂಬಿಕೊಳ್ಳಲು ಜನರ ನೂಕುನುಗ್ಗಲು
ಗ್ರಾಮದ ಮಲ್ಲಿಕಾರ್ಜುನ್ ಅವರಿಗೆ ಸೇರಿದ ಬೈಕ್ ಸ್ಫೋಟಗೊಂಡಿದೆ. ಮಲ್ಲಿಕಾರ್ಜುನ್ ಅವರ ಮಗ ಕಿರಣ್ ಚಾರ್ಜ್ ಹಾಕಿ ಅಲ್ಲಿಯೇ ಇದ್ದ ಮಂಚದ ಮೇಲೆ ಮಲಗಿದ್ದರು. ಸ್ಫೋಟದ ಸದ್ದು ಕೇಳಿದ್ದೇ ಅಲ್ಲಿಂದ ಬೇರೆಡೆ ಸರಿದುಕೊಂಡಿದ್ದಾರೆ.
ಸ್ಫೋಟದಿಂದ ಬೈಕ್ ಸಂಪೂರ್ಣ ಸುಟ್ಟು ಕರಕಲಾಗಿದ್ದು, ಹಲವು ವಸ್ತುಗಳು ಬೆಂಕಿಗೆ ಆಹುತಿಯಾಗಿವೆ.