ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಶಿವಮೊಗ್ಗ ಮಹಾನಗರ ಪಾಲಿಕೆಯು ಅ.16 ಮತ್ತು 17ರಂದು ಅಡುಗೆ ಸ್ಪರ್ಧೆ ಮತ್ತು ತಿನ್ನುವ ಸ್ಪರ್ಧೆ ಹಾಗೂ ಅ.16ರಿಂದ 24 ರವರೆಗೆ ಆಹಾರ ಮೇಳವನ್ನು ಆಯೋಜಿಸಿದ್ದು, ಆಸಕ್ತರಿಂದ ಅರ್ಜಿ ಆಹ್ವಾನಿಸಿದೆ.
ಯಾವ ದಿನ ಏನೆಲ್ಲ ಸ್ಪರ್ಧೆ?
ಅ.16ರಂದು ಬೆಳಗ್ಗೆ 10ಕ್ಕೆ ಒಂದು ನಿಮಿಷದಲ್ಲಿ ಹಣ್ಣು ತಿನ್ನುವ ಸ್ಪರ್ಧೆ (ಮಹಿಳಾ ಮತ್ತು ಪುರುಷ ಪೊಲೀಸ್ರಿಗೆ) ಹಾಗೂ ಮಧ್ಯಾಹ್ನ 11ಕ್ಕೆ ಎರಡು ನಿಮಿಷದಲ್ಲಿ ಕೊಟ್ಟೆ ಕಡುಬು ಮತ್ತು ಸಾಂಬರ್ ತಿನ್ನುವ ಸ್ಪರ್ಧೆಯನ್ನು (ಸಾರ್ವಜನಿಕರಿಗೆ) ನಗರದ ಶಿವಪ್ಪ ನಾಯಕ ವೃತ್ತ, ಗಾಂಧಿ ಬಜಾರ್ನಲ್ಲಿ ಏರ್ಪಡಿಸಲಾಗಿದೆ.
ಅ.17ರಂದು ನಗರದ ಶ್ರೀ ನಿಜಲಿಂಗಪ್ಪ ಸಮುದಾಯ ಭವನದಲ್ಲಿ ಮಧ್ಯಾಹ್ನ 12ಕ್ಕೆ ಅಡುಗೆ ಮಾಡುವ- ಗೋದಿ ರವೆ, ಪೇಣಿ ರವೆ ಉಪಯೋಗಿಸಿ ಖಾದ್ಯ ತಯಾರಿಸುವ (ಅಪ್ಪ, ಮಗಳು) ಸ್ಪರ್ಧೆಯನ್ನು ಏರ್ಪಡಿಸಲಾಗಿದೆ.
ಆಹಾರ ಮೇಳದಲ್ಲಿ 25 ಸ್ಟಾಲ್
ಅ.16ರಿಂದ 24ರ ವರೆಗೆ ವಿನೋಬನಗರದ ಫ್ರೀಡಂ ಪಾರ್ಕ್ನಲ್ಲಿ ವಿವಿಧ ಸಂಘ-ಸಂಸ್ಥೆಗಳ ಸಹಯೋಗದಲ್ಲಿ 25 ಸ್ಟಾಲ್ಗಳಲ್ಲಿ ಸಾಂಪ್ರದಾಯಿಕ ವಿವಿಧ ರೀತಿಯ ವಿಶಿಷ್ಟ ಅಡುಗೆಗಳ ತಯಾರಿಕೆ ಮತ್ತು ತಿನಿಸು ಅಂಗಳಗಳ ಆಹಾರ ಮೇಳವನ್ನು ಆಯೋಜಿಸಲಾಗಿದೆ.
ಆಹಾರ ಮೇಳ, ಸ್ಪರ್ಧೆಯಲ್ಲಿ ಭಾಗವಹಿಸಲು ಸಂಪರ್ಕಿಸಿ
ಈ ಎಲ್ಲ ಸ್ಪರ್ಧೆ ಮತ್ತು ಆಹಾರ ಮೇಳಕ್ಕೆ ಭಾಗವಹಿಸಲು ಇಚ್ಛಿಸುವವರು ಕೃಷ್ಣಮೂರ್ತಿ- 9886033982 ಮತ್ತು ನವೀನ್- 9902525752 ಇವರಗಳನ್ನು ಸಂಪರ್ಕಿಸಿ ನೋಂದಣಿ ಮಾಡಿಕೊಳ್ಳುವಂತೆ ಪಾಲಿಕೆ ಆಹಾರ ದಸರಾ ಸಮಿತಿ ಅಧ್ಯಕ್ಷರು ಪ್ರಕಟಣೆಯಲ್ಲಿ ತಿಳಿಸಿರುತ್ತಾರೆ.
READ | ಶಿವಮೊಗ್ಗ ದಸರಾ, ಬರಲಿದ್ದಾರೆ ನಟ, ನಟಿಯರು, ಇಲ್ಲಿದೆ ನಮ್ಮೂರು ದಸರಾದ ಪೂರ್ಣ ವೇಳಾಪಟ್ಟಿ
ರೈತ ದಸರಾದಲ್ಲಿ 10 ರೈತರಿಗೆ ಸನ್ಮಾನ
SHIMOGA: ನಾಡಹಬ್ಬ ಶಿವಮೊಗ್ಗ ದಸರಾ 2023 ಅಂಗವಾಗಿ ಅ.18 ರಂದು ಬೆಳಗ್ಗೆ 9.ಕ್ಕೆ ಬಿ.ಎಚ್.ರಸ್ತೆಯ ಸರ್ಕಾರಿ ಪದವಿ ಪೂರ್ವ ಕಾಲೇಜು, ಸೈನ್ಸ್ ಮೈದಾನದಲ್ಲಿ ‘ರೈತ ದಸರಾ’ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಕಾರ್ಯಕ್ರಮವನ್ನು ರೈತ ದಸರಾ ಸಮಿತಿ ಅಧ್ಯಕ್ಷೆ ಮೆಹೆಕ್ ಷರೀಫ್ ಉದ್ಘಾಟಿಸುವರು.
ಈ ಕಾರ್ಯಕ್ರಮದ ಅಂಗವಾಗಿ ರೈತರ ಜಾಥಾ ಹಮ್ಮಿಕೊಂಡಿದ್ದು, ರೈತರು ತಮ್ಮ ಅಲಂಕೃತ ಎತ್ತಿನಗಾಡಿ, ಟಿಲ್ಲರ್, ಟ್ರ್ಯಾಕ್ಟರ್ಗಳಲ್ಲಿ ಸೈನ್ಸ್ ಮೈದಾನದಿಂದ ಬಿ.ಎಚ್.ರಸ್ತೆಯಿಂದ ಕುವೆಂಪು ರಂಗಮಂದಿರ ತಲುಪಲಿದ್ದಾರೆ.
ಕುವೆಂಪು ರಂಗಮಂದಿರದಲ್ಲಿ ವೇದಿಕೆ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಚಿತ್ರದುರ್ಗ ಜಿಲ್ಲೆಯ ಪ್ರಗತಿಪರ ರೈತ, ಉದಯೋನ್ಮುಖ ಕೃಷಿ ಪಂಡಿತ ರಾಜ್ಯ ಪ್ರಶಸ್ತಿ ವಿಜೇತ ಜ್ಞಾನೇಶ್ವರ ಕೆ.ಆರ್. ಉದ್ಘಾಟಿಸಲಿದ್ದಾರೆ. ಈ ಕಾರ್ಯಕ್ರಮದಲ್ಲಿ ಮಹಾನಗರ ಪಾಲಿಕೆ ಮಹಾಪೌರ ಎಸ್. ಶಿವಕುಮಾರ್ ಅಧ್ಯಕ್ಷತೆ ವಹಿಸಲಿದ್ದಾರೆ.
ಕೃಷಿ ಮತ್ತು ಕೃಷಿಗೆ ಸಂಬಂಧಪಟ್ಟ ಇತರೆ ಇಲಾಖೆಗಳ ಸಹಯೋಗದಲ್ಲಿ ಶಿವಮೊಗ್ಗ ನಗರ ಶಾಸಕ ಎಸ್.ಎನ್. ಚನ್ನಬಸಪ್ಪ (ಚೆನ್ನಿ) ಹಾಗೂ ಶಿವಮೊಗ್ಗ ಗ್ರಾಮಾಂತರ ಶಾಸಕಿ ಶ್ರೀಮತಿ ಶಾರದಾ ಪೂರ್ಯನಾಯ್ಕ ಇವರುಗಳು ಕೃಷಿ ಕ್ಷೇತ್ರದಲ್ಲಿ ಸಾಧನೆ ಮಾಡಿದ 10 ಸಾಧಕರನ್ನು ಸನ್ಮಾನಿಸಲಿದ್ದಾರೆ. ಈ ಕಾರ್ಯಕ್ರಮಕ್ಕೆ ಶಿಮುಲ್, ಕೃಷಿ ವಿವಿ ಹಾಗೂ ರೈತ ಮುಖಂಡರುಗಳು ಸಹಕಾರ ನೀಡುವರು. ಈ ಕಾರ್ಯಕ್ರಮದಲ್ಲಿ ರೈತರು, ಸಾರ್ವಜನಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸುವಂತೆ ರೈತ ದಸರಾ ಸಮಿತಿಯು ಕೋರಿದೆ.
Book My HSRP | ಎಚ್.ಎಸ್.ಆರ್.ಪಿಗೆ ಅರ್ಜಿ ಸಲ್ಲಿಕೆ ಹೇಗೆ, ಏನಿದು ಅತಿ ಸುರಕ್ಷಿತ ನೋಂದಣಿ ಫಲಕ? ಇಲ್ಲಿದೆ ವಿವರ