ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಮಹಾನಗರ ಪಾಲಿಕೆಯು ಕನ್ನಡ ಮತ್ತು ಸಂಸ್ಕೃತಿ ಇಲಾಖೆಯೊಂದಿಗೆ ಅ.15ರಿಂದ 24ರ ವರೆಗೆ ನಮ್ಮೂರ ನಾಡಹಬ್ಬ ಶಿವಮೊಗ್ಗ ದಸರಾ-2023ರನ್ನು ವೈಭವದಿಂದ ಆಚರಿಸಲು ಸಕಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗುತ್ತಿದೆ.
READ | ಸಿಗಂದೂರು ಚೌಡೇಶ್ವರಿ ಸೇರಿ 9 ದೇವಿಯರ ಪರಿಚಯ, ದೇವಾಲಯದ ಇತಿಹಾಸ, ಮಹತ್ವ ತಿಳಿಸುವ ಕಾರ್ಯಕ್ರಮ, ಏನಿದೆ ವೇಳಾಪಟ್ಟಿ?
ಶಿವಮೊಗ್ಗ ದಸರಾ ವೇಳಾಪಟ್ಟಿ
→ ಅಕ್ಟೋಬರ್ 15ರಂದು ದಸರಾ ಮಹೋತ್ಸವಕ್ಕೆ ಚಾಲನೆ ನೀಡಲಾಗುವುದು. ಅಂದು ಬೆಳಗ್ಗೆ 11 ಗಂಟೆಗೆ ಕೋಟೆ ರಸ್ತೆಯ ಕೋಟೆ ಶ್ರೀ ಚಂಡಿಕಾ ದುರ್ಗಾ ಪರಮೇಶ್ವರಿ ದೇವಸ್ಥಾನದಲ್ಲಿ ಭಾರತೀಯ ಶಾಸ್ತ್ರೀಯ ನೃತ್ಯಗಾರ್ತಿ ವೈಜಯಂತಿ ಕಾಶಿ ಅವರು ದಸರಾ ಉದ್ಘಾಟಿಸುವರು. ಶ್ರೀ ಚಾಮುಂಡೇಶ್ವರಿ ದೇವಿಯ ಉತ್ಸವ ಮೂರ್ತಿಯನ್ನು ಪ್ರತಿಷ್ಠಾಪಿಸಲಾಗುವುದು. ನವರಾತ್ರಿ ವಿಶೇಷ: ಭಜನಾ ವೈಭವ ಕಾರ್ಯಕ್ರಮ ನಡೆಯಲಿದೆ.
ಅಕ್ಟೋಬರ್ 16ರಂದು ನಡೆಯಲಿರುವ ಕಾರ್ಯಕ್ರಮಗಳು
→ ಬೆಳಗ್ಗೆ 9ಕ್ಕೆ ಫ್ರೀಡಂ ಪಾರ್ಕ್ ನಲ್ಲಿ ಮಹಿಳಾ ದಸರಾ ನಡೆಯಲಿದೆ. ಚಿತ್ರನಟಿ ಪದ್ಮಜಾರಾವ್, ಕಿರುತೆರೆ ನಟಿ ಸುಷ್ಮಾ ಉದ್ಘಾಟನೆ ಮಾಡುವರು. ಅಂದು ಶಿವಮೊಗ್ಗ ನಗರದ ವಿವಿಧ ಮಹಿಳಾ ಸಂಘ ಸಂಸ್ಥೆಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿವೆ.
→ ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ದಸರಾ ಚಲನಚಿತ್ರೋತ್ಸವ ಜರುಗುವುದು. ಚಲನಚಿತ್ರ ನಿರ್ಮಾಪಕ, ನಿರ್ದೇಶಕ ಪನ್ನಗಾಭರಣ ಉದ್ಘಾಟಿಸುವರು. ಚಲನಚಿತ್ರ ಕಲಾವಿದೆ ಮೇಘನಾ ರಾಜ್ ದೂರದರ್ಶನ ನಿರೂಪಕಿ ಸಂಧ್ಯಾ ಭಟ್, ಚಲನಚಿತ್ರ ಮತ್ತು ಕಿರುತೆರೆ ಕಲಾವಿದೆ ರೂಪಿಕಾ ಆಗಮಿಸುವರು.
→ ಪುನೀತ್ ರಾಜಕುಮಾರ್ ಅವರ ಪುಣ್ಯಸ್ಮರಣೆ ಪ್ರಯುಕ್ತ ನಡೆಯುವ ದಸರಾ ಚಲನ ಚಿತ್ರೋತ್ಸವದಲ್ಲಿ 16ರಂದು ಮಲ್ಲಿಕಾರ್ಜುನ ಚಿತ್ರಮಂದಿರದಲ್ಲಿ 9 ಗಂಟೆಗೆ ‘ತತ್ಸಮ ತದ್ಭವ’ ಹಾಗೂ 17ರಂದು ವೀರಭದ್ರೇಶ್ವರ ಚಿತ್ರಮಂದಿರದಲ್ಲಿ ಬೆಳಗ್ಗೆ 9 ಗಂಟೆಗೆ ‘ಕಾಂತಾರ’ ಚಿತ್ರ ಪ್ರದರ್ಶಿಸಲಾಗುವುದು. ಇದಕ್ಕೆ ಉಚಿತ ಪ್ರವೇಶವಿದೆ.
17ರಂದು ನಡೆಯುವ ಕಾರ್ಯಕ್ರಮಗಳು
→ ಅಂಬೇಡ್ಕರ್ ಭವನದಲ್ಲಿ ದಸರಾ ಚಲನಚಿತ್ರ ರಸಗ್ರಹಣ ಕಾರ್ಯಾಗಾರ ನಡೆಯಲಿದೆ. 10 ಗಂಟೆಗೆ ನಡೆಯುವ ಕಾರ್ಯಕ್ರಮವನ್ನು ಮಾಜಿ ಸಚಿವ ಕೆ.ಎಸ್.ಈಶ್ವರಪ್ಪ ಉದ್ಘಾಟನೆ ಮಾಡುವರು.
→ ಮೊದಲ ಅವಧಿಯಲ್ಲಿ ‘ಚಲನಚಿತ್ರ ಮತ್ತು ಸಾಹಿತ್ಯ’ ಕುರಿತು ಮಾತನಾಡಲು ಸಂಪನ್ಮೂಲ ವ್ಯಕ್ತಿಯಾಗಿ ಚಿಂತಕ ಶಾಂತರಾಮ್ ಪ್ರಭು ಆಗಮಿಸುವರು.
→ ಎರಡನೇ ಅವಧಿಯಲ್ಲಿ ಚಲನಚಿತ್ರ- ಕಿರುಚಿತ್ರ ನಿರ್ಮಾಣ ಕುರಿತು ರಾಷ್ಟ್ರಪ್ರಶಸ್ತಿ ಪುರಸ್ಕøತ ನಿರ್ದೇಶಕ ಡಿ.ಸತ್ಯಪ್ರಕಾಶ್ ಮಾತನಾಡುವರು.
→ ಮೂರನೇ ಅವಧಿಯಲ್ಲಿ ಚಲನಚಿತ್ರ ಛಾಯಾಗ್ರಹಣ ಕುರಿತು ಹೆಸರಾಂತ ಚಲನಚಿತ್ರ ಛಾಯಾಗ್ರಾಹಕ ಜಿ.ಎಸ್.ಭಾಸ್ಕರ್, ನಾಲ್ಕನೇ ಅವಧಿಯಲ್ಲಿ ಹಾಡು ಹುಟ್ಟಿದ ಬಗೆ ಕುರಿತು ಚಲನಚಿತ್ರ ಚಿಂತಕ ಎನ್.ಎಸ್.ಶ್ರೀಧರ್ ಮೂರ್ತಿ ಮಾತನಾಡುವರು. ಸಂಜೆ 4.30ಕ್ಕೆ ಸಮಾರೋಪ ಸಮಾರಂಭ ನೆರವೇರಲಿದೆ.
→ 17ರ ಬೆಳಗ್ಗೆ 10ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗ ದಸರಾ ನಡೆಯಲಿದೆ. ರಂಗ ಜಾಥಾಕ್ಕೆ ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ ಪುರಸ್ಕೃತ ಕಾಂತೇಶ್ ಕದರಮಂಡಲಗಿ ಚಾಲನೆ ನೀಡುವರು. ನಟ ದೊಡ್ಡಣ್ಣ ಉದ್ಘಾಟನೆ ಮಾಡುವರು.
→ ಮಧ್ಯಾಹ್ನ 12.30ಕ್ಕೆ ಕುವೆಂಪು ರಂಗಮಂದಿರದಲ್ಲಿ ರಂಗಗೋಷ್ಠಿ ನಡೆಯಲಿದೆ. 2.30ಕ್ಕೆ ಪೌರಕಾರ್ಮಿಕರ ನಾಟಕ ಪ್ರದರ್ಶನ ನಡೆಯಲಿದೆ. ಮಲೆನಾಡು ಕಲಾ ತಂಡದಿಂದ ಬೆಳಗ್ಗೆ 11ರಿಂದ ಪರಿವರ್ತನೆ ಬೀದಿ ನಾಟಕ ಪ್ರದರ್ಶನ ಮಾಡಲಾಗುವುದು.
→ ಗೋಪಾಳದ ಆದಿಕವಿ ಪಂಪ ಉದ್ಯಾನವನದ ಬಳಿ ಸಂಜೆ 6.30ರಿಂದ ರಂಗಗೀತೆ ಗಾಯನ ನಡೆಯಲಿದೆ.
→ ಕುವೆಂಪು ರಂಗಮಂದಿರದಲ್ಲಿ ಸಂಜೆ 7ಕ್ಕೆ ಒಂದು ಕಾನೂನಾತ್ಮಕ ಕೊಲೆ ನಾಟಕ ಪ್ರದರ್ಶನಗೊಳ್ಳಲಿದೆ.
18ರಂದು ನಡೆಯುವ ಕಾರ್ಯಕ್ರಮಗಳು
→ ಮುಖಾಮುಖಿ ತಂಡದಿಂದ ಬೆಳಗ್ಗೆ 8.30ರಿಂದ ನಗರದ ಹೊಳೆ ಬಸ್ ನಿಲ್ದಾಣ, ಕೆ.ಇ.ಬಿ ವೃತ್ತ, ರಾಮಣ್ಣ ಶ್ರೇಷ್ಠಿ ಪಾರ್ಕ್, ಗೋಪಾಳದ ಶ್ರಿಶಕ್ತಿ ಗಣಪತಿ ದೇವಸ್ಥಾನ ಈ ಸ್ಥಳಗಳಲ್ಲಿ ಕ್ರಮವಾಗಿ ಬೆಳಗ್ಗೆ 8.30, 10.30, ಮಧ್ಯಾಹ್ನ 3.30 ಮತ್ತು ಸಂಜೆ 6ರಿಂದ “ಜೀವಜಲ” ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ. ಸಂಜೆ 6.30ರಿಂದ ಗೋಪಾಳದ ಶ್ರಿಶಕ್ತಿ ಗಣಪತಿ ದೇವಸ್ಥಾನದಲ್ಲಿ ರಂಗಗೀತೆ ಪ್ರದರ್ಶನಗೊಳ್ಳಲಿದೆ.
19ರಂದು ನಡೆಯುವ ವಿಶೇಷ ಕಾರ್ಯಕ್ರಮಗಳು
→ ಸಮುದಾಯ ತಂಡದಿಂದ ಬೊಮ್ಮನಕಟ್ಟೆಯ ಕೆಂಚಮ್ಮ ದೇವಸ್ಥಾನ ವೃತ್ತ, ಲಕ್ಷ್ಮೀ ಚಿತ್ರಮಂದಿರ ವೃತ್ತ, ನ್ಯೂಮಂಡ್ಲಿ ವೃತ್ತ, ಮಲವಗೊಪ್ಪದ ಶ್ರೀ ಚನ್ನಬಸವೇಶ್ವರ ದೇವಸ್ಥಾನದ ಆವರಣದಲ್ಲಿ ಕ್ರಮವಾಗಿ ಬೆಳಗ್ಗೆ 8.30, 10.30, ಮಧ್ಯಾಹ್ನ 3.30 ಮತ್ತು ಸಂಜೆ 6ರಿಂದ “ಬಾಯಾರಿಕೆ” ಬೀದಿನಾಟಕ ಪ್ರದರ್ಶಿಸಲಾಗುವುದು.
ಅ.20ರಂದು ನಡೆಯುವ ಕಾರ್ಯಕ್ರಮ
→ ಸಹ್ಯಾದ್ರಿ ರಂಗ ತರಂಗ ತಂಡದಿಂದ ನೆಹರೂ ಕ್ರೀಡಾಂಗಣ, ಶಿವಪ್ಪ ನಾಯಕ ವೃತ್ತ, ಪೊಲೀಸ್ ಚೌಕಿ, ಮಹಾವೀರ ವೃತ್ತದಲ್ಲಿ “ಆವಿಷ್ಕಾರ” ಬೀದಿ ನಾಟಕವು ಕ್ರಮವಾಗಿ ಬೆಳಗ್ಗೆ 8.30, 10.30, ಮಧ್ಯಾಹ್ನ 3.30 ಮತ್ತು ಸಂಜೆ 6ರಿಂದ ಪ್ರದರ್ಶನಗೊಳ್ಳಲಿದೆ.
→ ಸಂಜೆ 4.30ಕ್ಕೆ ಕುವೆಂಪು ರಂಗಮಂದಿರದಲ್ಲಿ ಪದವಿ ಮತ್ತು ಬಿಎಡ್ ವಿದ್ಯಾರ್ಥಿಗಳಿಂದ ರಂಗ ಗೀತೆ ಗಾಯನ ಕಾರ್ಯಕ್ರಮ ನಡೆಯಲಿದೆ.
→ ಸಂಜೆ 7ಕ್ಕೆ ಕುವೆಂಪು ರಂಗಮಂದಿರದಲ್ಲಿ ಭಾರತಾಂತರಂಗ ನಾಟಕ ಪ್ರದರ್ಶನಗೊಳ್ಳಲಿದೆ.
ಅ.21ರಂದು ನಡೆಯುವ ಕಾರ್ಯಕ್ರಮಗಳು
→ ಬೆಳಗ್ಗೆ 9.30ರಿಂದ ಸಂಜೆ 6.30ರ ವರೆಗೆ ಕಮಲಾ ನೆಹರೂ ಕಾಲೇಜು ಮತ್ತು ಕಸ್ತೂರಿಬಾ ಪಿಯು ಕಾಲೇಜಿನಲ್ಲಿ ರಾಜ್ಯಮಟ್ಟದ ಏಕ ಪಾತ್ರಾಭಿನಯ ಸ್ಪರ್ಧೆ ನಡೆಯಲಿದೆ.
→ ಕುವೆಂಪು ರಂಗಮಂದಿರದಲ್ಲಿ ಬೆಳಗ್ಗೆ 10.30ರಿಂದ ಮೂಕಾಭಿನಯ ಸ್ಪರ್ಧೆ ನಡೆಯಲಿದೆ.
→ ಹಕ್ಕಿಪಿಕ್ಕಿ ಕ್ಯಾಂಪ್, ವಡ್ಡಿನಕೊಪ್ಪ ವೃತ್ತ, ಪುರಲೆ ವೃತ್ತ, ಶ್ರೀದುರ್ಗಮ್ಮನ ದೇವಿ ದೇವಸ್ಥಾನ ಆವರಣದಲ್ಲಿ ಕ್ರಮವಾಗಿ ಬೆಳಗ್ಗೆ 8.30, 10.30, ಮಧ್ಯಾಹ್ನ 3 ಹಾಗೂ ಸಂಜೆ 5.30ರಿಂದ ಬಯಲು ಬಾಗಿಲು ಬೀದಿ ನಾಟಕ ಪ್ರದರ್ಶನಗೊಳ್ಳಲಿದೆ.
→ ಕುವೆಂಪು ರಂಗಮಂದಿರದಲ್ಲಿ ಸಂಜೆ 6.30ರಿಂದ ಸಮಾರೋಪ ಸಮಾರಂಭ ನಡೆಯಲಿದೆ. ನಾಟಕಕಾರ ಬಿ.ಚಂದ್ರೇಗೌಡ ಸಮಾರೋಪ ನುಡಿ ನುಡಿಯುವರು.
READ | ತೀರ್ಥಹಳ್ಳಿ ಪ್ರಕರಣ, ಎರಡು ದಿನವಾದರೂ ಫಲಿಸದ ಚಿಕಿತ್ಸೆ, ಅರ್ಚಕರ ಕಿರಿಯ ಪುತ್ರನೂ ಸಾವು
- ಅ.15ರಂದು ಯುವ ದಸರಾ, ಕುವೆಂಪು ರಂಗಮಂದಿರ, ಸಂಜೆ 4.30ಕ್ಕೆ
- ಅ.17ರಂದು ಟ್ರಸರ್ ಹಂಟ್, ಮಹಾನಗರ ಪಾಲಿಕೆ ಆವರಣ, ಬೆ.10.30ಕ್ಕೆ
- ಅ.18ರಂದು ಟ್ಯಾಲೆಂಟ್ ಹಂಟ್, ಶಿವಮೊಗ್ಗ ನಾಯಕ ಮಾಲ್, ಸಂಜೆ 5.30
- ಅ.19ರಂದು ಕಬ್ಬಡ್ಡಿ ಪಂದ್ಯಾವಳಿ, ನೆಹರೂ ಕ್ರೀಡಾಂಗಣ, ಸಂಜೆ 4
- ಅ.20ರಂದು ಮ್ಯೂಸಿಕಲ್ ನೈಟ್, ಫ್ರೀಡಂ ಪಾರ್ಕ್, ಸಂಜೆ 5
- ಅ.21ರಂದು ಜಿಲ್ಲಾ ಮಟ್ಟದ ನೃತ್ಯ ಸ್ಪರ್ಧೆ, ಫ್ರೀಡಂ ಪಾರ್ಕ್, ಸಂಜೆ 5.30
- ಅ.20ರಂದು ಸಾಂಸ್ಕೃತಿಕ ದಸರಾದಲ್ಲಿ ಸಾಹಿತ್ಯ ಸಂಭ್ರಮ, ಕಮಲಾ ನೆಹರೂ ಮಹಿಳಾ ಕಾಲೇಜು, ಸಂಜೆ 5
- ಅ.22ರಂದು ನಾಟ್ಯ ವೈವಿಧ್ಯ, ಸಂಗೀತ ಸಂಭ್ರಮವನ್ನು ನಟ ಅಜಯ್ ರಾಮ್ ಉದ್ಘಾಟಿಸುವರು. ಫ್ರೀಡಂ ಪಾರ್ಕ್, ಸಂಜೆ 5.30
- ಅ.23ರಂದು ಸಂಗೀತ, ಜಾನಪದ ವೈವಿಧ್ಯ ಕಾರ್ಯಕ್ರಮದಲ್ಲಿ ನಟ ವಿಜಯ್ ರಾಘವೇಂದ್ರ ಉದ್ಘಾಟಿಸುವರು. ಫ್ರೀಡಂ ಪಾರ್ಕ್, ಸಂಜೆ 5.30
- ಅ.23ರಂದು ಯಕ್ಷ ದಸರಾ, ಕುವೆಂಪು ರಂಗಮಂದಿರ, ರಾತ್ರಿ 10
- ಪರಿಸರ ದಸರಾ, ರೈತ ದಸರಾ, ಕಲಾ ದಸರಾ ಕಾರ್ಯಕ್ರಮಗಳು ನಡೆಯಲಿವೆ.