ಸುದ್ದಿ ಕಣಜ.ಕಾಂ ತೀರ್ಥಹಳ್ಳಿ
THIRTHAHALLI: ತಾಲೂಕಿನ ಕೆಕೋಡ್ ಗ್ರಾಮದಲ್ಲಿ ಅಗ್ನಿ ದುರಂತದಲ್ಲಿ ಒಂದೇ ಕುಟುಂಬದ ಮೂವರು ಮನೆಯಲ್ಲೇ ಸುಟ್ಟು ಕರಕಲಾಗಿದ್ದರು. ಒಬ್ಬನನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆವರು ಸಹ ಚಿಕಿತ್ಸೆ ಫಲಕಾರಿಯಾಗದೇ ಮಂಗಳವಾರ ಮೃತಪಟ್ಟಿದ್ದಾರೆ.
ಭರತ್ (28) ಬೆಂಗಳೂರಿನ ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾರೆ. ಈ ಮೂಲಕ ಘಟನೆಯಲ್ಲಿ ಇಡೀ ಕುಟುಂಬವೇ ಮೃತಪಟ್ಟಂತಾಗಿದೆ.
READ | ತೀರ್ಥಹಳ್ಳಿಯಲ್ಲಿ ಒಂದೇ ಕುಟುಂಬದ ಮೂವರು ಸಜೀವ ದಹನ, ಒಬ್ಬನ ಸ್ಥಿತಿ ಗಂಭೀರ, ಇಡೀ ಗ್ರಾಮವೇ ದಂಗು
ಮೂವರು ಸಜೀವ ದಹನ
ಕಳೆದ ಭಾನುವಾರ ಮನೆಯಲ್ಲಿ ಕಟ್ಟಿಗೆಗಳನ್ನು ಸಂಗ್ರಹಿಸಿ ಪೆಟ್ರೋಲ್ ಸುರಿದುಕೊಂಡು ಬೆಂಕಿ ಹಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದರು. ಈ ವೇಳೆ ಕುಟುಂಬದ ಮೂವರು ಮನೆಯಲ್ಲಿಯೇ ಸುಟ್ಟು ಕರಕಲಾಗಿದ್ದರು. ಅದರಲ್ಲಿ ಭರತ್ ಒಬ್ಬ ಆತ್ರ ಮನೆಯಿಂದ ಹೊರಗಡೆ ಓಡಿ ಬಂದಿದ್ದರಿಂದ ಆತನನ್ನು ಆಸ್ಪತ್ರೆಗೆ ಕರೆತರಲಾಗಿತ್ತು.
ನಗರದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಇನ್ನಷ್ಟು ಚಿಕಿತ್ಸೆಯ ಅವಶ್ಯಕತೆ ಮನಗಂಡು ಬೆಂಗಳೂರಿಗೆ ಕಳುಹಿಸಿಕೊಡಲಾಗಿತ್ತು. ನಿರಂತರ ಎರಡು ದಿನಗಳ ಕಾಲ ನೀಡಲಾದ ಚಿಕಿತ್ಸೆ ಫಲ ನೀಡಿಲ್ಲ.
ಯಾರೆಲ್ಲ ಮೃತಪಟ್ಟಿದ್ದಾರೆ?
ಈ ಘಟನೆಯಿಂದ ಗ್ರಾಮದ ಜನರು ದಂಗಾಗಿದ್ದರು. ಘಟನೆಯಲ್ಲಿ ಅರ್ಚಕರಾಗಿದ್ದ ರಾಘವೇಂದ್ರ ಕೆಕೋಡ್(65), ಅವರ ಪತ್ನಿ ನಾಗರತ್ನ(55), ಹಿರಿಯ ಪುತ್ರ ಶ್ರೀರಾಮ್(30) ಮೃತಪಟ್ಟಿದ್ದರು. ಇಂದು ಕಿರಿಯ ಪುತ್ರ ಭರತ್(28) ಸಹ ಮೃತಪಟ್ಟಿದ್ದಾರೆ.