ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ನಗರದ ಖಾಸಗಿ ಬಸ್ ನಿಲ್ದಾಣ ಬಳಿಯ ಹೂವಿನ ಮಾರ್ಕೆಟ್ ಎದುರು ನಿಲ್ಲಿಸಿದ್ದ ಸ್ಪ್ಲೆಂಡರ್ ಬೈಕ್ ಅನ್ನು ಇತ್ತೀಚೆಗೆ ಕಳ್ಳತನ ಮಾಡಲಾಗಿದೆ.
READ | ಮಾನವೀಯತೆ ಮೆರೆದ ಭಜರಂಗ ದಳ ಕಾರ್ಯಕರ್ತ ಹಿಂದೂ ಹರ್ಷನ ಕುಟುಂಬ, ವಿಶ್ವನಾಥ್ ಶೆಟ್ಟಿ ಪುತ್ರನಿಗೆ ಭೇಟಿ, ಕಾರಣವೇನು?
ಶರಾವತಿನಗರದ ಸಿದ್ದರಾಜು ಎಂಬುವವರ ಬೈಕ್ ಕಳ್ಳತನ ಮಾಡಲಾಗಿದೆ. ಮಾರ್ಚ್ 16ರಂದು ಮಧ್ಯಾಹ್ನ ಬೈಕ್ ನಿಲ್ಲಿಸಿ ಚನ್ನಗಿರಿ ಹೋಗಿದ್ದು. ಮಾರನೇ ದಿನ ಬಂದು ನೋಡಲಾಗಿ ಬೈಕ್ ಇರಲಿಲ್ಲ. ಎಲ್ಲ ಕಡೆಗಳಲ್ಲೂ ಹುಡುಕಾಟ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ. ದೊಡ್ಡಪೇಟೆ ಠಾಣೆಯಲ್ಲಿ ಮಾ.28ರಂದು ಪ್ರಕರಣ ದಾಖಲಾಗಿದೆ.