ಮನೆಗೆ ನುಗ್ಗಿ ಹಣಕ್ಕಾಗಿ ಉದ್ಯಮಿಗೆ ಜೀವ ಬೆದರಿಕೆ, ಆರೋಪಿ ಅರೆಸ್ಟ್

police

 

 

ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ಹಣಕ್ಕಾಗಿ ಉದ್ಯಮಿಯೊಬ್ಬರಿಗೆ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ಬಕಾತಿ ಅಕ್ರಂ ಅಲಿಯಾಸ್ ಕುಲ್ಡ ಅಕ್ರಂ ಎಂಬಾತನನ್ನು ಬಂಧಿಸಲಾಗಿದೆ. ಈತ ಎಂಕೆಕೆ ರಸ್ತೆಯ ಖಾಲಿ ಮೊಹಲ್ಲಾದ ನಿವಾಸಿಯಾದ ಉದ್ಯಮಿ ಫಕ್ರುದ್ದಿನ್ ಅಲಿ ಅಹಮ್ಮದ್ ಅವರ ಮನೆಗೆ ನುಗ್ಗಿ ಹಣಕ್ಕಾಗಿ ಬೇಡಿಕೆ ಇಟ್ಟಿದ್ದ. ಒಂದುವೇಳೆ, ಖರ್ಚಿಗೆ ಹಣ ನೀಡದಿದ್ದರೆ ಸಾಯಿಸುವ ಬೆದರಿಕೆಯೊಡ್ಡಿದ್ದ. ದೂರು ನೀಡಿದ ಹಿನ್ನೆಲೆ ಆರೋಪಿಯನ್ನು ಬಂಧಿಸಲಾಗಿದೆ.
ದೊಡ್ಡಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿಯನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.

CLICK | ಭದ್ರಾವತಿ ರೈಲ್ವೆ ನಿಲ್ದಾಣ ಬಳಿ ಪೊಲೀಸರ ದಿಢೀರ್ ದಾಳಿ, ಒಬ್ಬನ ಬಂಧನ

Leave a Reply

Your email address will not be published. Required fields are marked *

error: Content is protected !!