ಸುದ್ದಿ ಕಣಜ.ಕಾಂ | CITY | CRIME NEWS
ಶಿವಮೊಗ್ಗ: ವಿನೋಬನಗರದ ನಾಗೇಂದ್ರ ಕಾಲೋನಿ(Nagendra colony)ಯಲ್ಲಿ ಸದಾನಂದ್ ಬಂಗಾರಪ್ಪ ಅವರಿಗೆ ಸೇರಿದ ಪ್ರಾವಿಜನಲ್ ಸ್ಟೋರ್(provisional store)ಗೆ ಮಂಗಳವಾರ ಬೆಳ್ಳಂಬೆಳಗ್ಗೆ ಬೆಂಕಿ (fire) ಬಿದ್ದಿದ್ದು, ಲಕ್ಷಾಂತರ ಮೌಲ್ಯದ ಸಾಮಗ್ರಿಗಳು ಸುಟ್ಟು ಭಸ್ಮವಾಗಿವೆ.
READ | ಕೊನೆಯುಸಿರೆಳೆದ ಅಪ್ಪಟ ಮಲೆನಾಡ ಪ್ರತಿಭೆ ವಿನಯ್ ಸೀಬಿನಕೆರೆ
ಅಂದಾಜು 3 ಲಕ್ಷ ರೂಪಾಯಿ ನಷ್ಟ
ವಿಘ್ನೇಶ್ವರ ಪ್ರಾವಿಜನ್ ಸ್ಟೋರಿನಲ್ಲಿ ಶಾರ್ಟ್ ಸರ್ಕ್ಯುಟ್(short circuit)ದಾಗಿ ಬೆಂಕಿ ತಗುಲಿದ್ದು, 1 ರೆಫ್ರಿಜಿರೇಟರ್, ನೀರಿನ ಬಾಟಲ್, ದಿನಸಿ ಸಾಮಗ್ರಿಗಳು, ಸ್ಟೇಷನರಿ ವಸ್ತುಗಳು ಸಂಪೂರ್ಣವಾಗಿ ಸುಟ್ಟು ಕರಕಲಾಗಿವೆ.
ಅಂಗಡಿಯಲ್ಲಿ 6 ಲಕ್ಷ ರೂಪಾಯಿ ಮೌಲ್ಯದ ವಸ್ತುಗಳಿದ್ದವು. ಅದರಲ್ಲಿ ಅಂದಾಜು 3 ಲಕ್ಷ ರೂ.ಮೌಲ್ಯದ ವಸ್ತುಗಳು ಸುಟ್ಟು ಕರಕಲಾಗಿವೆ. ಬೆಂಕಿ ತಗುಲಿದ ವಿಚಾರ ಅಗ್ನಿಶಾಮಕ ದಳಕ್ಕೆ ತಿಳಿಸಿದ್ದೇ ಘಟನಾ ಸ್ಥಳಕ್ಕೆ ಸಿಬ್ಬಂದಿ ದೌಡಾಯಿಸಿದ್ದಾರೆ. ಬೆಂಕಿಯನ್ನು ನಂದಿಸಲು ಸಫಲರಾಗಿದ್ದಾರೆ.