ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಪರೀಕ್ಷೆ ಬರೆಯುವುದಕ್ಕೆ ಕಾರ್ಕಳಕ್ಕೆ ತೆರಳುತ್ತಿದ್ದ ವಿದ್ಯಾರ್ಥಿಯ ಕುಟುಂಬಕ್ಕೆ ಗೃಹ ಸಚಿವ ಆರಗ ಜ್ಞಾನೇಂದ್ರ ಸಹಾಯ ಮಾಡುವ ಮೂಲಕ ಮಾನವೀಯತೆ ಮೆರೆದ್ದಿದ್ದಾರೆ.
CLICK HERE TO SEE VIDEO
READ | ಶಿವಮೊಗ್ಗ ವಿಮಾನ ನಿಲ್ದಾಣ ನಾಮಕರಣ ವಿಚಾರ ಮತ್ತೆ ಮುನ್ನೆಲೆಗೆ, ಯಾರ ಹೆಸರಿಡುವಂತೆ ಒತ್ತಾಯ?
ನಡೆದಿದ್ದೇನು?
ಶಿವಮೊಗ್ಗದಿಂದ ಕಾರ್ಕಳಕ್ಕೆ ಸಂಚರಿಸುತ್ತಿದ್ದ ಕಾರು ಕುಡುಮಲ್ಲಿಗೆ ಸಮೀಪ ಅಪಘಾತಕ್ಕೀಡಾಗಿದ್ದು, ಪ್ರಯಾಣಿಕರು ಅಪಾಯದಿಂದ ಪಾರಾಗಿದ್ದಾರೆ.
ಕಾರ್ಕಳದಲ್ಲಿ ಪರೀಕ್ಷೆ ಬರೆಯುವುದಕ್ಕೆಂದು ಹೊರಟಿದ್ದಾಗ ಕಾರು ರಸ್ತೆ ಅಪಘಾತದಲ್ಲಿ ಗುಂಡಿಗೆ ಸಿಲುಕಿತ್ತು. ನಿರ್ಜನ ಪ್ರದೇಶವಾಗಿದ್ದರಿಂದ ಮರುಕ ವ್ಯಕ್ತಪಡಿಸಿ ಮುಂದೆ ಸಾಗುತ್ತಿದ್ದರೇ ವಿನಹ ಸಹಾಯಕ್ಕೆ ಧಾವಿಸಿರಲಿಲ್ಲ.
ಗೃಹ ಸಚಿವರು ಶಿವಮೊಗ್ಗಕ್ಕೆ ಹೋಗುತ್ತಿದ್ದಾಗ ಪ್ರಯಾಣಿಕರ ಜೊತೆ ಮಾತನಾಡಿ, ಕಾರನ್ನು ಎಲ್ಲರ ಸಹಾಯದಿಂದ ಮೇಲೆತ್ತಿ, ಕಾರಿನಲ್ಲಿದ್ದ ವಿದ್ಯಾರ್ಥಿಗೆ ಪರೀಕ್ಷೆ ಬರೆಯಲು ಕಾರ್ಕಳಕ್ಕೆ ತೆರಳಲು ನೆರವು ನೀಡಲಾಯಿತು. ಕುಟುಂಬದ ಸದಸ್ಯರು ಕೃತಜ್ಞತೆಯನ್ನು ತಿಳಿಸಿದರು.
https://suddikanaja.com/2023/01/02/date-fix-for-releasing-of-vaisampayana-theera-movie/