ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದಲ್ಲಿ ಮಂಗಳವಾರ ಮಧ್ಯಾಹ್ನ ಸುರಿದ ಧಾರಾಕಾರ ಮಳೆ ಹಲವೆಡೆ ಅನಾಹುತಗಳನ್ನು ಸೃಷ್ಟಿಸಿದೆ. ಏಕಾಏಕಿ ಸುರಿದ ಮಳೆಯಿಂದಾಗಿ ರಸ್ತೆಗಖು ಜಲಾವೃತಗೊಂಡಿದ್ದವು. ಅಕ್ಕಪಕ್ಕ ನಿಲ್ಲಿಸಿದ ವಾಹನಗಳು ನೀರಿನಲ್ಲಿ ಮುಳುಗಿದ ಘಟನೆ ನಡೆದಿದೆ.
ಮಂಗಳವಾರ ಬರೀ ಒಂದು ಗಂಟೆ ಮಳೆ ಸುರಿದಿದ್ದು, ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದೆ. ಹಲವೆಡೆ ಮನೆ, ವಾಣಿಜ್ಯ ಸಂಕೀರ್ಣದೊಳಗೆ ನೀರು ನುಗ್ಗಿದೆ.
READ | ರಾಜ್ಯದಲ್ಲೇ ಅತಿ ಹೆಚ್ಚು ಮೊಬೈಲ್ ಟಾವರ್ ಶಿವಮೊಗ್ಗಕ್ಕೆ ಮಂಜೂರು
ಎಲ್ಲಿ ಏನೇನಾಗಿದೆ?
- ನಗರದ ಜಿಲ್ಲಾ ಕಾಂಗ್ರೆಸ್ ಕಚೇರಿ ಮುಂಭಾಗದ ರಸ್ತೆಯಲ್ಲಿ ಮೊಣಕಾಲುದ್ದ ನೀರು ನಿಂತಿದ್ದವು. ಅಲ್ಲಿ ನಿಲ್ಲಿಸಿದ ಬೈಕ್ ಗಳು ಜಲಾವೃತಗೊಂಡವು. ಚರಂಡಿಯಲ್ಲಿ ನೀರು ಸರಾಗವಾಗಿ ನುಗ್ಗಲಾಗದೇ ರಸ್ತೆಯ ಮೇಲೆಯೇ ನೀರು ಶೇಖರಣೆಗೊಂಡವು. ರಸ್ತೆ ಬದಿ ಪಾರ್ಕಿಂಗ್ ಮಾಡಿದ ದ್ವಿಚಕ್ರ ವಾಹನಗಳು ನಾಲ್ಕು ಚಕ್ರ ವಾಹನ ತೆರಳಿದ್ದೇ ಪಲ್ಟಿಯಾದವು.
- ವೆಂಕಟೇಶ ನಗರದ ಶಾಲೆ ಆವರಣದೊಳಗೆ ನೀರು ನುಗ್ಗಿತ್ತು. ಒಳಗಡೆ ತುಂಬಿದ ನೀರು ಹೊರಹೋಗಲಾಗದೇ ಶಾಲೆಯ ಆವರಣ ಜಲಾವೃತವಾಗಿತ್ತು. ಬಾಪೂಜಿನಗರ, ಅಣ್ಣಾನಗರ, ಕೆ.ಆರ್.ಪುರಂ ಸೇರಿ ಹಲವೆಡೆ ಮನೆಯೊಳಗೆ ನೀರು ನುಗ್ಗಿದೆ.
- ಹೊಸಮನೆ ಬಡಾವಣೆಯಲ್ಲಿ ರಸ್ತೆಯು ಜಲಾವೃತವಾಗಿತ್ತು. ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ಶಾಪ ಹಾಕಿದರು.
- ಸ್ಮಾರ್ಟ್ ಸಿಟಿ ಕಾಮಗಾರಿಗಳಾದ ಜಾಗಗಳಲ್ಲಿ ನೀರು ಸಲೀಸಾಗಿ ಹರಿದು ಹೋಗಲಾಗದೇ ಚರಂಡಿಗಳು ಕಟ್ಟಿಕೊಂಡು ಜನರು ಪರದಾಡಿದರು. ಎಷ್ಟೇ ಪ್ರಯತ್ನಿಸಿದರೂ ಪ್ರಯೋಜನವಾಗಲಿಲ್ಲ. ನೂತನವಾಗಿ ನಿರ್ಮಿಸಿರುವ ಚರಂಡಿಯಲ್ಲಿ ಕಸ ತುಂಬಿಕೊಂಡಿದೆ.
- ಕೆಲವೆಡೆ ಈಗಲೂ ಸ್ಮಾರ್ಟ್ ಸಿಟಿ ಕಾಮಗಾರಿ ಪೂರ್ಣಗೊಂಡಿಲ್ಲ. ರಸ್ತೆಯ ನಡುವೆಯೇ ಗುಂಡಿಗಳನ್ನು ಹಾಗೆಯೇ ಬಿಡಲಾಗಿದೆ. ರಸ್ತೆಯ ತುಂಬ ನೀರು ತುಂಬಿದ್ದರಿಂದ ವಾಹನ ಸವಾರರು ಪರದಾಡಿದರು. ಕೂಡಲೇ ಗುಂಡಿಗಳನ್ನು ಮುಚ್ಚಬೇಕು. ರಸ್ತೆಯ ಬದಿಯಲ್ಲಿ ಬಾಕಿ ಇರುವ ಕೆಲಸಗಳನ್ನು ಶೀಘ್ರ ಮುಗಿಸಬೇಕೆಂದು ಆಗ್ರಹಿಸಿದರು.
Drinking water | ಜುಲೈ 10ರೊಳಗೆ ಮಳೆಯಾಗದಿದ್ದರೆ ಶಿವಮೊಗ್ಗಕ್ಕೆ ಕಾದಿದೆ ಆಪತ್ತು