Murder | ದೀಪಾವಳಿ ದಿನವೇ ಶಿವಮೊಗ್ಗದಲ್ಲಿ ನಡೀತು ಕೊಲೆ, ಸ್ಥಳಕ್ಕೆ ಎಸ್.ಪಿ ಭೇಟಿ

Murder

 

 

ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ನಗರದ ಗುಡ್ಡೇಕಲ್ ಫ್ಲೈಓವರ್ (Guddekal Flyover) ಬಳಿ ವ್ಯಕ್ತಿ ವ್ಯಕ್ತಿಯೊಬ್ಬನ ಕೊಲೆ (Murder) ಮಾಡಿರುವ ಘಟನೆ ಮಂಗಳವಾರ ನಡೆದಿದೆ.

READ | ದುರ್ಘಟನೆ ತಡೆದ ಖಾಕಿ ಪಡೆ, ಡಕಾಯಿತಿಗೆ ಹೊಂಚು ಹಾಕಿ‌ದ್ದ ನಾಲ್ವರು ಅರೆಸ್ಟ್, ಮಾರಕಾಸ್ತ್ರಗಳು ಸೀಜ್

ಮಲ್ಲೇಶ್ (35) ಮೃತರು. ಕೊಲೆ ನಂತರ ಆರೋಪಿ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ. ಸ್ಥಳಕ್ಕೆ ಜಿಲ್ಲಾ ಪೊಲೀಸ್ ಅಧೀಕ್ಷಕ ಜಿ.ಕೆ.ಮಿಥುನ್ ಕುಮಾರ್ (GK Mithun kumar) ಹಾಗೂ ಕೋಟೆ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ. ಕೊಲೆಗೆ ವೈಯಕ್ತಿಕ ಕಾರಣ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

error: Content is protected !!