Accident | ಭೀಕರ ರಸ್ತೆ ಅಪಘಾತ, ಕ್ರೈಸ್ತ ಧರ್ಮಗುರು ಸಾವು

car accident

 

 

ಸುದ್ದಿ ಕಣಜ.ಕಾಂ ಸವಳಂಗ
SAVALANGA: ಸವಳಂಗ ರಸ್ತೆಯ ಚಿನ್ನಿಕಟ್ಟೆ ಸಮೀಪ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಕ್ರೈಸ್ತ ಧರ್ಮಗುರುವೊಬ್ಬರು ಸ್ಥಳದಲ್ಲೇ ಮೃತಪಟ್ಟ ಘಟನೆ ಮಂಗಳವಾರ ಸಂಭವಿಸಿದೆ.
ಕೆಎಸ್.ಆರ್.ಟಿಸಿ ಬಸ್ ಮತ್ತು ಕಾರಿನ ನಡುವೆ ಡಿಕ್ಕಿ ಸಂಭವಿಸಿದೆ. ಘಟನೆಯಲ್ಲಿ ಶಿಕಾರಿಪುರ ಧರ್ಮಕೇಂದ್ರದ ಧರ್ಮಗುರು ಅಂಥೋಣಿ ಪೀಟರ್ ಎಂಬುವವರು ಮೃತಪಟ್ಟಿದ್ದಾರೆ ಎಂದು ತಿಳಿದುಬಂದಿದೆ.

READ | ಹಾರಿಹೋದ ಎಲ್.ಕೆ.ಜಿ ಶಾಲೆ ಶೆಡ್! ಐದು ಮಕ್ಕಳು ಪ್ರಾಣಾಪಾಯದಿಂದ ಪಾರು

ಕಾರು ಮತ್ತು ಬಸ್ ನಡುವೆ ಮುಖಾಮುಖಿ ಡಿಕ್ಕಿ ಸಂಭವಿಸಿದೆ. ಬಸ್ ಹಾನಗಲ್ ನಿಂದ ಶಿವಮೊಗ್ಗ ಕಡೆಗೆ ಬರುವಾಗ ಘಟನೆ ನಡೆದಿದ್ದು, ಬಸ್ ಡಿಕ್ಕಿ ಹೊಡೆದ ರಭಸಕ್ಕೆ ಕಾರು ಪಕ್ಕದ ಜಮೀನಿಗೆ ಉರುಳಿದೆ. ನ್ಯಾಮತಿ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ.

error: Content is protected !!