ಸುದ್ದಿ ಕಣಜ.ಕಾಂ
ಶಿವಮೊಗ್ಗ: ಚಿಕ್ಕಮಗಳೂರು ಜಿಲ್ಲೆಯ ಎನ್.ಆರ್.ಪುರ ಹಾಗೂ ಉತ್ತರ ಕನ್ನಡ ಜಿಲ್ಲೆಯ ಗಡಿಭಾಗದ ಸಿದ್ದಾಪುರ ತಾಲೂಕಿನ ಕುಳಿಬೀಡಿನಲ್ಲಿ ತಲಾ ಒಂದು ಮಂಗನ ಕಾಯಿಲೆ ಪ್ರಕರಣ ಪತ್ತೆಯಾಗಿದೆ.
ಪ್ರಕರಣ 1 | ಎನ್.ಆರ್.ಪುರದಲ್ಲಿ 60 ವರ್ಷದ ಪುರುಷರೊಬ್ಬರಲ್ಲಿ ಫೆಬ್ರವರಿ 15ರಂದು ಪಾಸಿಟಿವ್ ಬಂದಿತ್ತು. ಅವರಲ್ಲೂ ಜ್ವರದ ಲಕ್ಷಣಗಳಿದ್ದುದ್ದರಿಂದ ಆಸ್ಪತ್ರೆಗೆ ಕರೆತರಲಾಗಿತ್ತು. ಆದರೆ, ರಕ್ತದ ಮಾದರಿಯನ್ನು ಪರೀಕ್ಷೆಗೆ ಒಳಪಡಿಸಿದಾಗ ಮಂಗನ ಕಾಯಿಲೆ ಇರುವುದು ದೃಢಪಟ್ಟಿದೆ. ಅವರು ಗುಣಮುಖರಾಗಿದ್ದಾರೆ.
ಪ್ರಕರಣ 2 | ಕುಳಿಬೀಡಿನಲ್ಲಿ 62 ವರ್ಷದ ಮಹಿಳೆಯಲ್ಲಿ ಜ್ವರ, ಮೈಕೈ ನೋವು ಹಿನ್ನೆಲೆ ಆಸ್ಪತ್ರೆಗೆ ಬಂದಿದ್ದರು. ಆಗ, ರಕ್ತದ ಮಾದರಿಯನ್ನು ಪರೀಕ್ಷಿಸಿದಾಗ ಮಂಗನ ಕಾಯಿಲೆ ಇರುವುದು ಗೊತ್ತಾಗಿದೆ. ಸೋಂಕಿತ ಮಹಿಳೆಯನ್ನು ಮಣಿಪಾಲದ ಕೆಎಂಸಿ ಆಸ್ಪತ್ರೆಗೆ ಚಿಕಿತ್ಸೆಗೋಸ್ಕರ ಕಳುಹಿಸಲಾಗಿದೆ. ಅವರು ಲಸಿಕೆ ಪಡೆದಿರಲಿಲ್ಲ. ಚಿಕಿತ್ಸೆ ನೀಡಲಾಗುತ್ತಿದ್ದು, ಗುಣಮುಖರಾಗುತ್ತಿದ್ದರೆಂದು ತಿಳಿದುಬಂದಿದೆ.