ಸುದ್ದಿ ಕಣಜ.ಕಾಂ
ಶಿವಮೊಗ್ಗ: ಹುಣಸೋಡು ಪ್ರಕರಣದಲ್ಲಿ 10ನೇ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
ರಾಯದುರ್ಗದಲ್ಲಿರುವ ಶ್ರೀರಾಮಲು ಅವರ ಸ್ಫೋಟಕ ಗೋದಾಮಿನಲ್ಲಿ ಕೆಲಸ ಮಾಡುತ್ತಿದ್ದ ವಿಜಯ ಕುಮಾರ್ ಎಂಬಾತನನ್ನು ವಶಕ್ಕೆ ಪಡೆಯಲಾಗಿದೆ. ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇಲ್ಲಿಯವರೆಗೆ ಅರೆಸ್ಟ್ ಆದವರು | ರವೀಂದ್ರನಗರ ನಿವಾಸಿ ಬಿ.ವಿ.ಸುಧಾಕರ್(57), ವಿನೋಬನಗರದ ನರಸಿಂಹ (39), ಚಾಲುಕ್ಯನಗರದ ಮುಮ್ತಾಜ್ ಅಹ್ಮದ್ (50), ಭದ್ರಾವತಿ ತಾಲೂಕಿನ ಜಂಬರಘಟ್ಟ ನಿವಾಸಿ ರಶೀದ್ (44), ಹುಣಸೋಡು ಗ್ರಾಮದ ಸ್ಫೋಟಗೊಂಡ ಜಮೀನಿನ ಮಾಲೀಕರಾದ ಹಾಗೂ ವಿನೋಬನಗರ ನಿವಾಸಿಗಳಾದ ಶಂಕರಗೌಡ ಟಿ.ಕುಲಕರ್ಣಿ(76), ಅವಿನಾಶ್ ಕುಲಕರ್ಣಿ (43), ಹಾಗೂ ಆಂಧ್ರ ಪ್ರದೇದ ಅನಂತಪುರಂ ನಿವಾಸಿಗಳಾದ ಪಿ.ಶ್ರೀರಾಮಲು(68), ಪಿ.ಮಂಜುನಾಥ್ ಸಾಯಿ (36), ಪೃಧ್ವಿರಾಜ್ ಸಾಯಿ ಎಂಬುವವರನ್ನು ಬಂಧಿಸಲಾಗಿದೆ.