ಕೋವಿಡ್ ಸಂಕಷ್ಟದಲ್ಲಿ ನಿರ್ಗತಿಕರಿಗೆ ಊಟ ನೀಡಿದ ಒಕ್ಕಲಿಗರ ಯುವ ವೇದಿಕೆ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಒಕ್ಕಲಿಗರ ಯುವ ವೇದಿಕೆಯಿಂದ ನಿರ್ಗತಿಕರು, ಬಡವರಿಗೆ ಊಟ, ಹಣ್ಣುಗಳನ್ನು ವಿತರಣೆ ಮಾಡಲಾಯಿತು. ಆದಿಚುಂಚನಗಿರಿ ಮಹಾಸಂಸ್ಥಾನ ಮಠದ ಶಿವಮೊಗ್ಗ ಶಾಖೆಯ ಪೀಠಾಧ್ಯಕ್ಷ ಪ್ರಸನ್ನನಾಥ ಸ್ವಾಮೀಜಿ ಅವರ ಸಹಕಾರದೊಂದಿಗೆ ಮಲ್ಲಿಗೇನಹಳ್ಳಿಯಲ್ಲಿರುವ ಗುಡಿಸಲು ವಾಸಿಗಳಿಗೆ ಆಹಾರ ವಿತರಿಸಲಾಯಿತು.

READ | ಶಿವಮೊಗ್ಗ, ಭದ್ರಾವತಿಯಲ್ಲಿ ಇನ್ನೂ ನಿಯಂತ್ರಣಕ್ಕೆ ಸಿಗುತ್ತಿಲ್ಲ‌ ಕೊರೊನಾ, ಇನ್ನುಳಿದೆಡೆ ಎಷ್ಟಿವೆ ಕೇಸ್? ಮುಂದುವರಿದ ಸಾವಿನ ಆರ್ಭಟ

ಮಾಜಿ ಸಚಿವ ಕಿಮ್ಮನೆ ರತ್ನಾಕರ್, ಜಿಲ್ಲಾ ಒಕ್ಕಲಿಗರ ಸಂಘದ ಅಧ್ಯಕ್ಷ ಶ್ರೀಕಾಂತ್, ಪಾಲಿಕೆ ಸದಸ್ಯರಾದ ರಮೇಶ್‍ಹೆಗ್ಡೆ, ಯಮುನಾರಂಗೇಗೌಡ, ಮಾಜಿ ಮೇಯರ್ ಸುವರ್ಣ ಶಂಕರ್, ವೇದಾ ವಿಜಯಕುಮಾರ್, ಕೆ.ಎನ್.ರಾಮಕೃಷ್ಣ, ಭಾರತೀ ರಾಮಕೃಷ್ಣ, ಶಾರದಮ್ಮ, ಕೆ.ಪಿ.ಶ್ರೀಪಾಲ್, ಜಿ.ರಾಘವೇಂದ್ರ, ಚೇತನ್‍ಗೌಡ ಉಪಸ್ಥಿತರಿದ್ದರು.

error: Content is protected !!