ಸುದ್ದಿ ಕಣಜ.ಕಾಂ
ಹೊಸನಗರ:ಮಗಳ ಜನ್ಮದಿನದಂದೇ ಅಪ್ಪನನ್ನು ಕೊರೊನಾ ಬಲಿ ಪಡೆದ ಘಟನೆ ಸೋಮವಾರ ನಡೆದಿದೆ.
ರಿಪ್ಪನ್ಪೇಟೆ ಸಮೀಪದ ಹಾಲುಗುಡ್ಡೆ ಗ್ರಾಮದ ಯುವರಾಜ್ (43) ಎಂಬುವವರು ಮೃತಪಟ್ಟಿದ್ದಾರೆ. ಇವರ ಸಾವಿನಿಂದ ಮನೆಯಲ್ಲಿ ಸೂತಕ ಛಾಯೆ ಆವರಿಸಿದೆ.
READ | ಕೊರೊನಾ ಅಟ್ಟಹಾಸ, ಒಂದೇ ದಿನ ತಾಯಿ, ಮಗ ಸಾವು, ಮನೆಯಲ್ಲಿ ಸೂತಕದ ಛಾಯೆ
ಒಂದು ವಾರದಿಂದ ಇವರು ಕೊರೊನಾಗೆ ಚಿಕಿತ್ಸೆ ಪಡೆಯುತ್ತಿದ್ದರು. ಆದರೆ, ಚಿಕಿತ್ಸೆ ಫಲ ನೀಡದೇ ಅವರು ಮೃತಪಟ್ಟಿದ್ದಾರೆ. ವಾರದ ಹಿಂದಷ್ಟೇ ಯುವರಾಜ್ ಅವರ ತಾಯಿ ನಿಧನ ಹೊಂದಿದ್ದರು.