ಸುದ್ದಿ ಕಣಜ.ಕಾಂ
ಶಿವಮೊಗ್ಗ: ಕರ್ನಾಟಕ ಮೃಗಾಲಯ ಪ್ರಾಧಿಕಾರಕ್ಕೆ ಒಳಪಡುವ ರಾಜ್ಯದ 9 ಮೃಗಾಲಯಗಳ ಸ್ಥಿತಿ ಕೊರೊನಾ ಕಾಲದಲ್ಲಿ ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾಗೂ ಮುಂಚೆ ಪ್ರವಾಸಿಗರ ಆಗಮನದಿಂದ ಇವುಗಳ ಸ್ಥಿತಿ ಸುಭೀಕ್ಷವಾಗಿತ್ತು. ಆದರೆ, ಲಾಕ್ ಡೌನ್ ನಿಂದಾಗಿ ಯಾವುದೇ ಪ್ರವಾಸಿಗಳು ಬರದೇ ಆದಾಯವೇ ಇಲ್ಲದಂತಾಗಿದೆ.
VIDEO REPORT
ರಾಜ್ಯದ ಕಲಬುರಗಿ, ಹಂಪಿ, ಚಿತ್ರದುರ್ಗ, ಬೆಂಗಳೂರು, ಬೆಳಗಾವಿ, ಗದಗ, ದಾವಣಗೆರೆ, ಶಿವಮೊಗ್ಗ ಮತ್ತು ಮೈಸೂರು ಜಿಲ್ಲೆಗಳಲ್ಲಿ ಮೃಗಾಲಯಗಳಿವೆ. ಇಲ್ಲಿ ಪ್ರಾಣಿಗಳನ್ನು ದತ್ತು ಪಡೆಯುವ ವ್ಯವಸ್ಥೆಯೂ ಇದೆ.
READ | ತಮಿಳಿನಲ್ಲಿ ಕನ್ನಡತಿಯ ಹವಾ, ವೀಕೆಂಡ್ ಮಾಡೆಲಿಂಗ್ ಟು ಸಿನಿ ಜರ್ನಿ
ಪ್ರತಿಯೊಂದು ಪ್ರಾಣಿಗಳಿಗೆ ಅದರದ್ದೇ ಆದ ರೇಟ್ ಕಾರ್ಡ್ ಇದ್ದು, ಒಂದು ದಿನದಿಂದ ಎಷ್ಟು ಬೇಕಾದರೂ ದಿನಗಳವರೆಗೆ ಪ್ರಾಣಿಗಳ ದತ್ತು ಪಡೆಯಬಹುದು. ಆದರೆ, ಈ ಪ್ರಕ್ರಿಯೆಗೆ ಕಳೆದ ಎರಡು ವರ್ಷಗಳಿಂದ ಗ್ರಹಣ ಹಿಡಿದಿದೆ. ಇದನ್ನು ಮನಗಂಡು ಚಾಲೆಂಜಿಂಗ್ ಸ್ಟಾರ್ ದರ್ಶನ್ ಅವರು ಮೃಗಾಲಯಗಳ ದತ್ತು ಪಡೆಯುವಂತೆ ಪ್ರಚಾರದ ವಿಡಿಯೋವೊಂದ ಬಿಟ್ಟಿದ್ದಾರೆ. ಅದು ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸದ್ದು ಮಾಡಿದೆ.
https://www.suddikanaja.com/2021/03/12/roberrt-movie-collection-in-box-office/