ಸಿಗಂದೂರು ವಿವಾದದ ಹಿಂದೆ ವ್ಯವಸ್ಥಿತ ಪಿತೂರಿ

 

 

ಸುದ್ದಿ ಕಣಜ.ಕಾಂ
ಶಿವಮೊಗ್ಗ: ಸಿಗಂದೂರು ದೇವಸ್ಥಾನದ ವಿವಾದದ ಹಿಂದೆ ವ್ಯವಸ್ಥಿತಿ ಪಿತೂರಿ ನಡೆದಿದೆ. ಇದಕ್ಕೆ ಶಾಸಕ ಹರತಾಳು ಹಾಲಪ್ಪ ಮತ್ತು ಮಲೆನಾಡು ಪ್ರದೇಶ ಅಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಗುರುಮೂರ್ತಿ ಅವರು ಕಾರಣ ಎಂದು ಮಾಜಿ ಶಾಸಕ ಗೋಪಾಲಕೃಷ್ಣ ಬೇಳೂರು ಆರೋಪಿಸಿದರು.
ಗೋಕರ್ಣ, ಕೊಲ್ಲೂರು ಮತ್ತು ಉಡುಪಿಯಲ್ಲೂ ಗೊಂದಲ, ಗಲಾಟೆಗಳಿವೆ. ಹಾಗಾದರೆ ಸರಕಾರ ಅವುಗಳನ್ನೇಕೆ ಮುಜರಾಯಿ ಇಲಾಖೆಗೆ ಸೇರಿಸುತ್ತಿಲ್ಲ ಎಂದು ಮಂಗಳವಾರ ಕರೆದಿದ್ದ ಸುದ್ದಿಗೋಷ್ಠಿಯಲ್ಲಿ ಖಾರವಾಗಿ ಪ್ರಶ್ನಿಸಿದರು.

ಡಿಸಿ ಮೇಲೆ ಗರಂ: ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್ ಅವರಿಗೆ ಮೇಲುಸ್ತುವಾರಿ ಸಮಿತಿ ರಚಿಸಲು ಅಧಿಕಾರವನ್ನು ಯಾರು ನೀಡಿದ್ದಾರೆ? ಅವರು ಡಿಸಿಯಂತೆ ಕೆಲಸ ಮಾಡಬೇಕೇ ವಿನಹ ಪಕ್ಷದ ಏಜೆಂಟರAತಲ್ಲ ಎಂದು ಟೀಕಿಸಿದರು.
ಸುದ್ದಿಗೋಷ್ಠಿಯಲ್ಲಿ ಹೊನಗೋಡು ರತ್ನಾಕರ್ ಇದ್ದರು.

Leave a Reply

Your email address will not be published. Required fields are marked *

error: Content is protected !!