ಸುದ್ದಿ ಕಣಜ.ಕಾಂ
ಸಾಗರ: ತಾಲೂಕಿನ ತುಮರಿಯಲ್ಲಿ ಬಸ್ ಸೌಲಭ್ಯವಿಲ್ಲದೇ ಪರೀಕ್ಷೆ ಹಾಜರಾಗಲು ಕಷ್ಟ ಪಡುತ್ತಿದ್ದ ವಿದ್ಯಾರ್ಥಿಗಳ ಪರ ಮಿಡಿದ ಅರಣ್ಯ ಇಲಾಖೆ ಭೇಷ್ ಎನಿಸಿಕೊಂಡಿದೆ.
ಅಭಯಾರಣ್ಯ ಪ್ರದೇಶದಲ್ಲಿ ಸೂಕ್ತ ಸಾರಿಗೆ ವ್ಯವಸ್ಥೆ ಇಲ್ಲದ್ದರಿಂದ ಅರಣ್ಯ ಇಲಾಖೆ ಮೂರು ವಾಹನಗಳನ್ನು ಇಂತಹವರ ಅನುಕೂಲಕ್ಕಾಗಿಯೇ ಬಿಡಲಾಗಿತ್ತು. ಅದರಲ್ಲಿ ತುಮರಿ ಮತ್ತು ಬಿಳಿಗಾರುದಲ್ಲಿರುವ ಪರೀಕ್ಷಾ ಕೇಂದ್ರಕ್ಕೆ ತಲುಪಿದ ವಿದ್ಯಾರ್ಥಿಗಳು ಕೃತಜ್ಞತೆಯನ್ನು ಸಲ್ಲಿಸಿದ್ದಾರೆ.
ಕಳೆದ ವರ್ಷ ಕಲಿಸಿದ ಪಾಠ | ಕಳೆದ ವರ್ಷ ಶರಾವತಿ ಅರಣ್ಯ ಪ್ರದೇಶದಿಂದ ಪರೀಕ್ಷೆ ಬರೆಯಲು ಹೊರಟಾಗ ರಸ್ತೆ ಮಧ್ಯೆ ಮರ ಬಿದ್ದು ಭಾರಿ ಸಮಸ್ಯೆಯಾಗಿತ್ತು. ಬಳಿಕ ಅದನ್ನು ತೆರವುಗೊಳಿಸಲಾಗಿತ್ತು. ಈ ಸಲ ಇಂತಹ ಸಮಸ್ಯೆಗಳು ಆಗದಂತೆ ಅರಣ್ಯ ಇಲಾಖೆ ಮುನ್ನೆಚ್ಚರಿಕೆ ವಹಿಸಿದೆ. ಅಲ್ಲದೇ ಪ್ರತ್ಯೇಕ ವಾಹನದ ವ್ಯವಸ್ಥೆಯನ್ನು ಕಲ್ಪಿಸಿದೆ.