ಸುದ್ದಿ ಕಣಜ.ಕಾಂ ಶಿವಮೊಗ್ಗ
SHIVAMOGGA: ಜಿಲ್ಲೆಯಾದ್ಯಂತ ನಿರಂತರ ಮಳೆಯಾಗುತ್ತಿದ್ದು, ನದಿಗಳು ಅಪಾಯ ಮಟ್ಟ ಮೀರಿ ಹರಿಯುತ್ತಿವೆ. ಹಲವಡೆ ಭಾರಿ ಅನಾಹುತ ಸಂಭವಿಸಿದೆ.
READ | ಶಿವಮೊಗ್ಗದಲ್ಲಿ ಭಾರೀ ಮಳೆ ಹಿನ್ನೆಲೆ ಶಾಲೆಗಳಿಗೆ ರಜೆ ಘೋಷಣೆ, ಕಾಲೇಜುಗಳ ಕಥೆ ಏನು?
- ಸಾಗರದ ಎಸ್ ಆರ್ ಎಸ್ ಮಿಲ್ ರಸ್ತೆಯಲ್ಲಿರುವ ಉಪಬಂದಿ ಕಾರ್ಯ ಹೊರಭಾಗದ ಗೋಡೆ ಕುಸಿದಿದೆ. ರಾತ್ರಿ ವೇಳೆ ಜೈಲಿನ ಗೋಡೆ ಹೊರ ಭಾಗಕ್ಕೆ ಕುಸಿದಿದ್ದರಿಂದ ಎಸ್ ಆರ್ ಎಸ್ ರಸ್ತೆಯು ಭಾಗಶಃ ಮುಚ್ಚಿದ್ದು ಸಂಚಾರ ಸ್ಥಗಿತಗೊಂಡಿದೆ.
- ಮಳೆಯ ಆರ್ಭಟಕ್ಕೆ ತಾಳಗುಪ್ಪ ಹೋಬಳಿಯ ಸೈದೂರು, ಮಂಡಗಳಲೆ, ತಡಗಳಲೆ, ಕಣಸೆ, ಬೀಸನಗದ್ದೆ, ತಟ್ಟೆಗುಂಡಿ ಗ್ರಾಮಗಳ ಕೃಷಿ ಭೂಮಿಯು ವರದಾ ನದಿ ಪ್ರವಾಹದಿಂದ ಜಲಾವೃತಗೊಂಡಿದೆ.
- ಹೊಸನಗರ ತಾಲೂಕಿನ ರಿಪ್ಪನಪೇಟೆಯ ಗಾಳಿಬೈಲು ಗ್ರಾಮದಲ್ಲಿ ಐತಿಹಾಸಿಕ ಹಿನ್ನೆಲೆ ಹೊಂದಿರುವ ಮದರಸ ಶಾಲೆಯ ಕಟ್ಟಡ ಕುಸಿದಿದೆ.
- ಸಾಗರ ತಾಲೂಕು ಆನಂದಪುರ ಸಮೀಪದ ನಂಜವಳ್ಳಿ ಹೊಳೆ ಮೈದುಂಬಿ ಹರಿಯುತ್ತಿದೆ. ಸಾಗರ ತಾಲೂಕು ಕೆಳದಿ ಸಮೀಪದ ಬಂದಗದ್ದೆಯಲ್ಲಿನ ಕೆರೆ ದಂಡೆ ಕುಸಿದಿದ್ದು ಸುಮಾರು 40 ಎಕರೆ ಅಡಕೆ ತೋಟಕ್ಕೆ ನೀರು ನುಗ್ಗಿದೆ.
- ಜೋಗ ಜಲಪಾತ ಪರಿಸರದಲ್ಲಿ ಭಾರಿ ಮಳೆ ಆಗುತ್ತಿದ್ದು ಜೋಗದ ಸೊಬಗನ್ನು ವೀಕ್ಷಿಸುವುದಕ್ಕಾಗಿ ಪ್ರವಾಸಿಗರು ಬರುತ್ತಿದ್ದಾರೆ.
- ಸೊರಬ ತಾಲೂಕಿನಲ್ಲಿ ಧಾರಾಕಾರ ಮಳೆ ಆಗುತ್ತಿದ್ದು ವರದ ದಂಡಾವತಿ ನದಿಗಳು ಸೇರಿದಂತೆ ಕೆರೆಕಟ್ಟುಗಳು ಮೈದುಂಬಿ ಹರಿಯುತ್ತವೆ ತತ್ತೂರು ವಡ್ಡಿಗರೇರಿ ಗ್ರಾಮದಲ್ಲಿ ಮನೆಯ ಗೋಡೆಗಳು ಕುಸಿದಿವೆ. ದಂಡವತಿ ನದಿ ನೀರಿನ ಪ್ರವಾಹವು ನಿಸರಾಣಿ ಕುಪ್ಪೆ ಕಾನಗೋಡು ಚೀಲೂರು, ಮರೂರು ಗ್ರಾಮಗಳ ಜಮೀನು ಜಲಾವೃತಗೊಳಿಸಿದೆ.
- ತೀರ್ಥಹಳ್ಳಿ ತಾಲೂಕಿನಲ್ಲೂ ಸಹ ವರದಾ ನದಿಯ ಪ್ರವಾಹದಿಂದಾಗಿ ಬೀಸನಗದ್ದೆ ವ್ಯಾಪ್ತಿಯ ಸಾವಿರಾರು ಎಕರೆ ಭತ್ತದ ಗದ್ದೆ ಮುಳುಗಡೆಯಾಗಿದೆ. ಪಟ್ಟಣದ ತುಂಗಾ ನದಿಯ ಪುರಾಣ ಪ್ರಸಿದ್ಧ ರಾಮ ಮಂಟಪ ಸಹ ಮುಳುಗುವ ಹಂತದಲ್ಲಿದೆ. ಒಂದು ವಾರದಿಂದ ಸತತ ಮಳೆಯಾಗುತ್ತಿದ್ದು ಭಾರಿ ಮಳೆ ಗಾಳಿಯ ಕಾರಣದಿಂದಾಗಿ ಬಹುತೇಕ ಗ್ರಾಮಗಳಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿದೆ.
Shimoga airport | ಶಿವಮೊಗ್ಗ ವಿಮಾನ ನಿಲ್ದಾಣ ಆರಂಭಕ್ಕೂ ಮುನ್ನವೇ ಲಕ್ಷಾಂತರ ಆದಾಯ!